ಹಿರಿಯ ಪತ್ರಕರ್ತೆಯರಾದ ಆರ್.ಪೂರ್ಣಿಮಾ, ವಿಜಯಮ್ಮ, ಮಾಲತಿ ಭಟ್, ಪದ್ಮಾ ಶಿವಮೊಗ್ಗ, ಶಾಂತಲಾ ಧರ್ಮರಾಜ್, ಹವ್ಯಾಸಿ ಪತ್ರಕರ್ತೆ ಸಂಧ್ಯಾರಾಣಿ, ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಅನಂತಸುಬ್ಬರಾವ್, ಪ್ರೆಸ್ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಮಾಧ್ಯಮಗಳ ಮಹಿಳಾ ಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು ಭಾಗವಹಿಸಿದ್ದರು.