ಗಣೇಶನ ಮಾತು ನಂಬಿ, ₹5 ಲಕ್ಷದ ಚೆಕ್ ನೀಡಿದೆ. ಜೆ.ಪಿ ನಗರದ, ಆರ್ಬಿಐ ಬಡಾವಣೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಶಾಖೆಯ ಚೆಕ್ ಅನ್ನು ರಾಜೇಶ್ ಮತ್ತು ಚಂದ್ರಶೇಖರ್ ಎಂಬುವರ ಮೂಲಕ ಮುರಳಿ, ಡ್ರಾ ಮಾಡಿಕೊಂಡು, ರಿಲಯನ್ಸ್ ಕಂಪನಿ ಹೆಸರಲ್ಲಿ ವಿಮೆಯ ಬಾಂಡ್ ನೀಡಿದ್ದಾರೆ. ಈ ಬಗ್ಗೆ ಅನುಮಾನಗೊಂಡು ಕಂಪನಿಗೆ ಹೋಗಿ ವಿಚಾರಿಸಿದಾಗ, ಅಂತಹ ಯಾವುದೇ ಸೌಲಭ್ಯಗಳನ್ನು ನೀಡಲಾಗುವುದಿಲ್ಲ, ನಿಮಗೆ ನೀಡಿರುವ ಬಾಂಡ್ ನಕಲಿ ಎಂದು ತಿಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.