‘ಈ ಶೃಂಗಸಭೆಯಲ್ಲಿ ಮಹತ್ವದ ಒಪ್ಪಂದ ಆಗುವ ಬಗ್ಗೆ ನಿರೀಕ್ಷೆ ಇಲ್ಲ. ಬದಲಿಗೆ ಉಭಯ ನಾಯಕರ ಈ ಭೇಟಿ ಎರಡೂ ದೇಶಗಳ ಬಾಂಧವ್ಯದಲ್ಲಿ ಹೊಸ
ಮೈಲುಗಲ್ಲಾಗಲಿದೆ. ದ್ವಿಪಕ್ಷೀಯ ಹಾಗೂ ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಪರಸ್ಪರ ವಿಚಾರಗಳ ವಿನಿಮಯಕ್ಕೆ ಇದೊಂದು ಅವಕಾಶವಾಗಲಿದೆ. ಹಲವು ವಿವಾದಗಳು ಮತ್ತು ಭಿನ್ನತೆಗಳ ನಡುವೆಯೂ ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಉಭಯ ನಾಯಕರು ಶ್ರಮಿಸುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.