ಚಾಮರಾಜನಗರದ ಪುಣುಜನೂರು ಸುತ್ತಮುತ್ತ 16 ಮಿ.ಮೀ, ಕಾಗಲವಾಡಿಯಲ್ಲಿ 28 ಮಿ.ಮೀ, ಮಲ್ಲಯ್ಯನಪುರದಲ್ಲಿ 14, ಪುಟ್ಟೇಗೌಡನಹುಂಡಿಯಲ್ಲಿ 4.5, ಯರಗನಹಳ್ಳಿಯಲ್ಲಿ 8.5, ಯಳಂದೂರು ತಾಲ್ಲೂಕಿನ ಗುಂಬಳ್ಳಿಯಲ್ಲಿ 9.5 ಮಿ.ಮೀನಷ್ಟು ಮಳೆಯಾಗಿದೆ. ಬಿರುಗಾಳಿಯ ವೇಗ ಗಂಟೆಗೆ 14 ಕಿ.ಮೀಗೂ ಅಧಿಕ ಇತ್ತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.