ತಾಲ್ಲೂಕಿನ ಗೊರ್ತಪಲ್ಲಿ, ತಿಮ್ಮಂಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದರು. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದ ಜನರ ನಾಡಿಮಿಡಿತ, ಸಾಂಸ್ಕತಿಕ, ಸಾಮಾಜಿಕ, ರಾಜಕೀಯ ಪರಿಚಯವಿಲ್ಲದ ಮುಖಂಡರು, ಚುನಾವಣಾ ದೃಷ್ಟಿಯಿಂದ ಬರುವರು. ನಂತರ ಗಂಟುಮೂಟೆ ಕಟ್ಟುವವರೆ ಹೊರತು, ಇಲ್ಲಿಯ ಜನರ ಸಮಸ್ಯೆಗೆ ಸ್ಪಂದಿಸುವುದಿಲ್ಲ ಎಂದು ಹೇಳಿದರು.