ಪ್ರತಿ ವರ್ಷ ಶ್ರೀರಾಮ ನವಮಿಯಂದು ಇಲಿ ಉಟ್ಲು ಪರಿಷೆ ನಡೆಯುತ್ತದೆ. ಪೌರ್ಣಮಿಯಂದು ಸತ್ಯನಾರಾಯಣ ವ್ರತ ಆಚರಿಸಲಾಗುತ್ತದೆ. ಅಮಾವಾಸ್ಯೆಯಂದು ನಡೆಯುವ ಪೂಜೆ ಮತ್ತು ಭಜನೆ ಕಾರ್ಯಕ್ರಮಕ್ಕೆ ಮಳ್ಳೂರು, ಕಾಚಹಳ್ಳಿ, ಮುತ್ತೂರು, ಮೇಲೂರು, ಕಂಬದಹಳ್ಳಿ, ಚೌಡಸಂದ್ರ, ಬೆಳ್ಳೂಟಿ, ಗಂಗನಹಳ್ಳಿ, ನೆಲಮಾಕನಹಳ್ಳಿ, ಕೇಶವಪುರ, ಕೇಶವಾರ, ಹಂಡಿಗನಾಳ, ಹೊಸಹುಡ್ಯ, ಭಕ್ತರಹಳ್ಳಿ, ಜಂಗಮಕೋಟೆ, ಕಾಕಚೊಕ್ಕಂಡಹಳ್ಳಿ, ಕೊಂಡೇನಹಳ್ಳಿ, ಕಡೆಶೀಗನಹಳ್ಳಿ, ಕಣಿತಹಳ್ಳಿ ಹಾಗೂ ಶಿಡ್ಲಘಟ್ಟದಿಂದ ಭಕ್ತಾದಿಗಳು ಬರುವರು.