ಭಾನುವಾರ ಮಧ್ಯಾಹ್ನ ವೇಳೆಯೇ ಘಾಟಿಯ 2ನೇ ತಿರುವಿನಲ್ಲಿ ಘನವಾಹನ ವೊಂದು ತಿರುಗಲಾಗದೇ ಅರ್ಧ ಗಂಟೆಗೂ ಅಧಿಕ ಕಾಲ ಹೆದ್ದಾರಿ ಸಂಚಾರ ಸ್ಥಗಿತವಾಗಿತ್ತು. ಕೊಟ್ಟಿಗೆಹಾರದ ಕಡೆಯಿಂದ ಬಂದಿದ್ದ ವಾಹನವು ತಿರುವಿನಲ್ಲಿ ಸಿಲುಕಿಕೊಂಡಿದ್ದು, ಹಿಂದೆ, ಮುಂದೆ ಮಾಡಿ ವಾಹನವನ್ನು ಬದಿಗೆ ತೆಗೆದುಕೊಳ್ಳುವಷ್ಟರಲ್ಲಿ ಅರ್ಧ ಕಿ.ಮೀ. ಗೂ ಅಧಿಕ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು.