ವಕೀಲೆ ಪಾರ್ವತಿ ಮಾತನಾಡಿ, ‘ಭೂಮಿಯ ಸಂರಕ್ಷಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಖಾಲಿ ಪ್ರದೇಶಗಳಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ, ಭೂ ಸವಕಳಿಯನ್ನು ತಡೆಯಬೇಕು. ವ್ಯರ್ಥವಾಗಿ ಹರಿಯುವ ನೀರನ್ನು ತಡೆದು, ಭೂಮಿಯ ಅಂತರ್ಜಲವನ್ನು ಹೆಚ್ಚಿಸಿ ಭೂಮಿಯ ತಾಪವನ್ನು ಕಡಿಮೆಗೊಳಿಸಬೇಕು. ಕೊಳವೆ ಬಾವಿಗಳನ್ನು ಕುಗ್ಗಿಸಿ, ಭೂಮಿಯ ಅಂತರ್ಜಲವನ್ನು ಹೆಚ್ಚಿಸಬೇಕು. ನಾವು ಭೂಮಿಯನ್ನು ಬಳಕೆ ಮಾಡಿಕೊಂಡಂತೆ, ಮುಂದಿನ ಪೀಳಿಗೆಗೂ ಭೂಮಿಯ ಬಳಕೆಗೆ ಯೋಗ್ಯವಾಗಿ ಬಿಟ್ಟುಕೊಡುವಂತಾಗಬೇಕು’ ಎಂದರು.