ಮಕ್ಕಳಿಗೆ ಸರಿಯಾದ ಶಿಕ್ಷಣ ಹಾಗೂ ಸಂಸ್ಕಾರಗಳನ್ನು ನೀಡಿದರೆ ಉನ್ನತ ಸಾಧನೆ ಮಾಡುವರು. ಮಕ್ಕಳು ಖಾಲಿ ಚೀಲದಂತೆ, ಅದರಲ್ಲಿ ಏನು ತುಂಬಬೇಕು ಎಂದು ಚಿಂತನೆ ನಡೆಸಬೇಕು. ಬೇಸಿಗೆ ಶಿಬಿರದಲ್ಲಿ ಲೋಕ ಶಿಕ್ಷಣ ನೀಡುವುದು ಒಳಿತು. ಹಿಂದೆ ಬೇಸಿಗೆ ಶಿಬಿರಗಳ ಅಗತ್ಯ ಇರಲಿಲ್ಲ. ಅಜ್ಜ-ಅಜ್ಜಿಯರಿಂದ ಕಲಿಯುತ್ತಿದ್ದರು. ಇಂದು ಮಕ್ಕಳು ಇದರಿಂತ ವಂಚಿತರಾಗಿದ್ದಾರೆ ಎಂದು ವಿಷಾದಿಸಿದರು.