ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ತಿರಸ್ಕರಿಸಬೇಕು. ಬಬಲೇಶ್ವರ ಮತಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸೋಲಿಸಲು ಬಿಜೆಪಿಯನ್ನು ಬೆಂಬಲಿಸಬೇಕು. ಅದರಂತೆ ಉಳಿದ ಕ್ಷೇತ್ರಗಳಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿ ನಮಗೆ ಅನುಕೂಲವಾಗುವ ಹಾಗೂ ನಮ್ಮ ಸಮಾಜದ ಬಗ್ಗೆ ಭರವಸೆಯುಳ್ಳ ಪಕ್ಷಕ್ಕೆ ಮತ ನೀಡಬೇಕು ಎಂದು ನಿರ್ಣಯಿ ಸಲಾಯಿತು. ಬಹುತೇಕ ಬಿಜೆಪಿಯನ್ನು ಬೆಂಬಲಿಸುವ ಕಡೆ ಒಲವು ವ್ಯಕ್ತವಾಯಿತು. ರಾಮಚಂದ್ರ ಕರವಿನಾಳ, ರೇವಣಸಿದ್ದ ಕೊಲಕಾರ,ಸಿದ್ದಣ್ಣ ಐರೋಡಗಿ, ದೇವಾನಂದ ಹೋರ್ತಿ, ದಶರಥ ನಾಟೀಕಾರ, ಶಿವಶರಣ ಮದ್ದರಕಿ, ಶಿವಪ್ಪ ಡಾಂಗಿ, ದಯಾನಂದ ನಾಯ್ಕೋಡಿ,ಬಸವರಾಜ ನಾಗೂರ, ಚಂದು ಅಂಬಿಗೇರ, ಅಭಿಗೌಡ ಬಿರಾದಾರ, ಬಸವರಾಜ ನಾಟೀಕಾರ, ಭಾಗಣ್ಣ ಕೆಂಬಾವಿ, ವಿವಿಧ ಗ್ರಾಮಗ ಕೋಲಿ ಸಮಾಜದವರು ಪಾಲ್ಗೊಂಡಿದ್ದರು.