ಇದು ಒಂದು ಸಾವಿರ ನಿಮಿಷಗಳ ಅವಧಿಯ ನಾಟಕವಾಗಿದೆ. ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣದಲ್ಲಿನ ರಾಮನ ಅವತಾರ, ಅವನ ಮೂಲ ನೆಲೆ, ಅಹಲ್ಯೆಯ ಶಾಪ ವಿಮೋಚನೆ, ಸೀತಾ ಸ್ವಯಂವರ, ರಾವಣ, ಹನುಮಂತ, ಸುಗ್ರೀವ, ಭರತನ ಚರಿತ್ರೆಯು ಈ ನಾಟಕದಲ್ಲಿ ದಾಖಲಿಸಲಾಗಿದೆ. ದಶರಥನ ಆಸ್ಥಾನದಿಂದ ಪ್ರಾರಂಭವಾಗುವ ಕಥೆಯು ಶ್ರೀರಾಮನ ಪಟ್ಟಾಭಿಷೇಕದೊಂದಿಗೆ ಮುಕ್ತಾಯವಾಗುತ್ತದೆ.