ಆತ್ಮಸಾಕ್ಷಿ ಮತ್ತು ಆತ್ಮಶುದ್ಧಿಯ ರಾಜಕಾರಣದಿಂದ ಎದುರಾಳಿಯ ಪಶುಬಲವನ್ನು ಮಣಿಸಬಹುದೆಂದು ತೋರಿಸಿಕೊಟ್ಟವರು ಗಾಂಧೀಜಿ. ಆದ್ದರಿಂದಲೇ ಅವರು ರಾಜಕಾರಣದಲ್ಲಿ, ರಾಜಕೀಯ ಹೋರಾಟಗಳಲ್ಲಿ ತಮಗೆ ಮಾದರಿ ಎಂದು ನೆಲ್ಸನ್ ಮಂಡೇಲ, ಮಾರ್ಟಿನ್ ಲೂಥರ್ ಕಿಂಗ್, ಒಬಾಮ ಮುಂತಾದವರು ಒಪ್ಪಿಕೊಂಡಿದ್ದಾರೆ. ಆದರೆ ನಮ್ಮ ರಾಜಕಾರಣಿಗಳು ತಾವೇ ಪಶುಬಲ ಪ್ರದರ್ಶಿಸುತ್ತಾ, ಆತ್ಮಸಾಕ್ಷಿರಹಿತ ರಾಜಕೀಯ ಮಾಡುತ್ತಿದ್ದಾರೆ. ಇಂಥವರ ಉಪವಾಸಗಳಿಗೆ ಬೆಲೆ ಇಲ್ಲ ಎಂದು ತ್ಯಾಗರಾಜ್ ಹೇಳಿರುವುದು ಸರಿಯಾಗಿಯೇ ಇದೆ.