ಇದಕ್ಕೆಲ್ಲಾ ಹೆದರೋಲ್ಲ: ‘ನಾನು ಇದಕ್ಕೆಲ್ಲಾ ಹೆದರಲ್ಲಾ. ನನ್ನ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತೇನೆ. ಪ್ರಕರಣದ ತನಿಖೆ ಕುರಿತು ಏನೂ ಹೇಳುವುದಿಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದಾರೆ. ಈ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದು ಲೋಕಾಯುಕ್ತರು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
**
ತುಮಕೂರು ಜಿಲ್ಲೆಯ ತೇಜ್ರಾಜ್ ಎಂಬಾತ ಶೆಟ್ಟಿ ಅವರನ್ನು ಮಾರ್ಚ್ 7ರಂದು ಚಾಕುವಿನಿಂದ ಇರಿದಿದ್ದ. ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.