‘ಸ್ನೇಹಿತ ಪ್ರಕಾಶ್ ಮೂಲಕ ಕೃಷ್ಣೆ ಅರಸು ಅವರಿಗೆ ಎರಡು ವರ್ಷಗಳ ಹಿಂದೆ ಶ್ರೀನಿವಾಸ್ ಗೌಡ ಪರಿಚಯವಾಗಿತ್ತು. ಅದೇ ವೇಳೆ ಆರೋಪಿ, ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಸುಮಾರು ದಿನಗಳ ನಂತರ ಕೃಷ್ಣೇ ಅರಸುಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಮಕ್ಕಳಿಗೆ ಹಾಗೂ ಪರಿಚಯಸ್ಥರ ಮಕ್ಕಳಿಗೆ ಕೆಪಿಎಸ್ಸಿ, ಅಬಕಾರಿ ಇಲಾಖೆ ಹಾಗೂ ಇತರೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ. ಅದಕ್ಕೆ ಬೇಕಾದ ಹಣ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬನ್ನಿ’ ಎಂದಿದ್ದರು.