ಪುಸ್ತಕ ತಾಂಬೂಲದ ವಿಶೇಷ:
ಮದುವೆಗೆ ಬಂದವರಿಗೆ ರುಚಿಯಾದ ಊಟದ ಜತೆಗೆ, ನಂತರ ತಾಂಬೂಲ ನೀಡಿದರು. ಆ ತಾಂಬೂಲದ ಕವರ್ನಲ್ಲಿ ಎಲೆ ಅಡಿಕೆ, ತೆಂಗಿನ ಕಾಯಿ ಇರಲಿಲ್ಲ. ಬದಲಿಗೆ ‘ಪುಸ್ತಕ ತಾಂಬೂಲ’ ಎಂಬ ಕವರ್ನಲ್ಲಿ ಡಿ.ಎಸ್. ನಾಗಭೂಷಣ ಅವರ ‘ಇಂದಿಗೆ ಬೇಕಾದ ಗಾಂಧಿ’ ಹಾಗೂ ಗಾಂಧೀಜಿ ಅವರ ಕೃತಿ ‘ಹಿಂದ್ ಸ್ವರಾಜ್’ ಕೃತಿಗಳನ್ನಿಟ್ಟು, ಉಡುಗೊರೆ ನೀಡಲಾಯಿತು. ಈ ಮೂಲಕ ಏಪ್ರಿಲ್ 23ರ ವಿಶ್ವ ಪುಸ್ತಕ ದಿನ’ವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಲಾಯಿತು.