ಸೋಮವಾರ ಶ್ರೀಶೈಲ ವೀರಶೈವ ಗುರುಕುಲ ವೇದ ಅಧ್ಯಯನ ಮಾಡಿದ ಪಂಡಿತರು, ಕಾಶೀ ಜ್ಞಾನಪೀಠ ಪುರಸ್ಕೃತರು ಆದ ಗವಮಠಂ ವಿಶ್ವನಾಥ ಶಾಸ್ತ್ರಿಗಳ ನೇತೃತ್ವದಲ್ಲಿ 28 ಜನ ಋತ್ವಿಜರು ಅಣಿಮಾದಿ ಅಷ್ಟಸಿದ್ಧಿ ಪ್ರಾಪ್ತಿಯಾಗ ನಡೆಸಿಕೊಟ್ಟರು. ಸರ್ವತೋಭದ್ರ ಮಂಡಲಪಿತ ಆಹ್ವಾಹಿತ ದೇವತಾ ಶತಚೇಷ್ಟಿಯೋಗಿನಿ ದೇವಿಯಂತರ ಪೂಜಾ, ಚಂಡಿಯಾಗ, ನವಗ್ರಹ ವಾಸ್ತುಮಂಡಲ, ಭದ್ರಮಂಡಲ, ಸುಹಾಸಿನಿ ಪೂಜಾ, ಸುಮಂಗಲಿ ಪೂಜಾ, ಇತ್ಯಾದಿ ಪೂಜಾ ಕೈಂಕರ್ಯಗಳನ್ನು ಅತ್ಯಂತ ಭಕ್ತಿಯಿಂದ ನೆರವೇರಿಸಲಾಯಿತು.