ಒಂದೆಡೆ ಅರ್ಹತೆಯನ್ನು ಹಿಂದಿಕ್ಕುವ ಮೀಸಲಾತಿ, ಇನ್ನೊಂದೆಡೆ ವಂಶಪಾರಂಪರ್ಯ ಆಡಳಿತ. ರಾಜಕಾರಣಿಗಳು ಕೋಟ್ಯಧೀಶರಾದರೇ ವಿನಾ, ದೇಶದ ಸ್ಥಿತಿ ಸುಧಾರಿಸಿಲ್ಲ. ಚುನಾವಣೆಯಲ್ಲಿ ‘ಗೆಲ್ಲುವ ಕುದುರೆಗೆ ಮಾತ್ರ ಟಿಕೆಟ್’, ಅಂದರೆ ಅವರಿಗೆ ಇದೊಂದು ರೇಸು ಅಷ್ಟೆ! ಕುಟುಂಬದ ಇಬ್ಬಿಬ್ಬರಿಗೆ ಸೀಟು, ಸಿಕ್ಕವರಿಗೆ ಸೀರುಂಡೆ– ಸಿಗದವರ ಹ್ಯಾಪ ಮೋರೆ, ಕಣ್ಣೀರ ಕೋಡಿ. ನೀವೇ ಹೇಳಿ ನಾವು ಯಾರನ್ನು ಬೆಂಬಲಿಸುವುದು?