ಚುನಾವಣೆಯಲ್ಲಿ ಒಬ್ಬರು ಇನ್ನೊಬ್ಬರನ್ನು ಸೋಲಿಸಲು ತಂತ್ರ ಮಾಡಿದರೆ ಅದು ಷಡ್ಯಂತ್ರ ಹೇಗಾಗುತ್ತದೆ? ಸ್ವಾಮೀಜಿ ಪ್ರಕಾರ, ಸಿದ್ದರಾಮಯ್ಯನವರ ಗೆಲುವಿಗೆ ಯಡಿಯೂರಪ್ಪ ಶ್ರಮಿಸಬೇಕೇನು? ‘ಸಿದ್ದರಾಮಯ್ಯ ಕುರುಬ ಸಮಾಜದ ಪ್ರಶ್ನಾತೀತ ನಾಯಕ’ ಎಂದು ಸ್ವಾಮೀಜಿ ಹೇಳಿದ್ದಾರೆ. ಹಾಗಿದ್ದರೆ ಅದೇ ಸಮುದಾಯದ ಈಶ್ವರಪ್ಪ ಅವರಂಥ ನಾಯಕರು ಎಲ್ಲಿಗೆ ಹೋಗಬೇಕು? ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಕುರುಬ ಸಮಾಜದವರು ಮಾತ್ರ ಗೆಲ್ಲಿಸಿದರೇನು? ಸ್ವಾಮೀಜಿಗಳು ಈ ರೀತಿಯ ಹೇಳಿಕೆ ಕೊಡುವುದನ್ನು ನಿಲ್ಲಿಸದಿದ್ದರೆ ಅವರ ಮೇಲಿನ ಗೌರವ ಹೊರಟು ಹೋಗುತ್ತದೆ.
ಶಿವಕುಮಾರ ಬಂಡೋಳಿ, ಹುಣಸಗಿ