ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಗಳವಾರ ಮೂರು ಜನ ಅನುಮಾನಾಸ್ಪದ ವ್ಯಕ್ತಿಗಳನ್ನು ಆರೋಪಿಗಳನ್ನು ಹಿಡಿದಿದ್ದು ತುಮಕೂರು ತಾಲ್ಲೂಕಿನ ಚೋಳಂಬಳ್ಳಿ ಗ್ರಾಮಸ್ಥರು ಹಿಡಿದಿದ್ದಾರೆ. ಮಾಹಿತಿ ಮೇರೆಗೆ ತುಮಕೂರು ನಗರ ಠಾಣೆ ಪೊಲೀಸರು ತೆರಳಿದ್ದರು. ಅಲ್ಲಿ 15-20 ಜನರು ಮೂವರ ಮೇಲೆ ಹಲ್ಲೆ ನಡೆಸುತ್ತಿದ್ದುದ್ದನ್ನು ಕಂಡ ಪೊಲೀಸರು ಆರೋಪಿಗಳನ್ನು ಬಿಡಿಸಿದ್ದರು. ಮಹಮ್ಮದ್ ಅಫ್ತಾ, ಸೈಯದ್ ಖಾಸಿಂ ಸಾಬ್, ಹಾಗೂ ಶೇಖರ್ ಎಂಬುವರನ್ನು ನಗರ ಠಾಣೆ ಇನ್ ಸ್ಪೆಕ್ಟರ್ ಮತ್ತು ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಇದರಲ್ಲಿ ಮಹಮದ್ ಅಫ್ತಾನ ಬಳಿ ಪಿಸ್ತೂಲ್ ಪತ್ತೆಯಾಗಿತ್ತು’ ಎಂದು ವಿವರಿಸಿದರು.