ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ ಹಿಂದೂಗಳಿಗೆ ಸುರಕ್ಷಿತವಲ್ಲ; ಮಮತಾ ಬ್ಯಾನರ್ಜಿ ಶೂರ್ಪನಖಿ: ಬಿಜೆಪಿ ಶಾಸಕ

Last Updated 25 ಏಪ್ರಿಲ್ 2018, 10:44 IST
ಅಕ್ಷರ ಗಾತ್ರ

ನವದೆಹಲಿ: ಉತ್ತರಪ್ರದೇಶದ ಶಾಸಕ ಸುರೇಂದ್ರ ಸಿಂಗ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಅವರನ್ನು ಶೂರ್ಪನಖಿ ಎಂದು ಕರೆದಿದ್ದಾರೆ.

ಶೂರ್ಪನಖಿ ಹುಟ್ಟಿದರೆ ಲಕ್ಷ್ಮಣ ಆಕೆಯನ್ನು ಕೊಲ್ಲುತ್ತಾನೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಜೋಡಿ ಈ ಶೂರ್ಪನಖಿ (ಮಮತಾಬ್ಯಾನರ್ಜಿ)ಯ ಮೂಗನ್ನು ಕತ್ತರಿಸುತ್ತಾರೆ ಎಂದು ಸಿಂಗ್ ಹೇಳಿದ್ದಾರೆ.

ಆನಂತರ  ಶೂರ್ಪನಖಿ ಹೇಳಿಕೆ ಬಗ್ಗೆ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ ಸಿಂಗ್, ಪಶ್ಚಿಮ ಬಂಗಾಳದಲ್ಲಿ ರಸ್ತೆಯಲ್ಲಿಯೇ ಜನರ ಹತ್ಯೆ ನಡೆಯುತ್ತಿದ್ದರೂ ಬ್ಯಾನರ್ಜಿಯವರು ಸುಮ್ಮನಿದ್ದಾರೆ. ಬಂಗಾಳದಲ್ಲಿ ಹಿಂದೂಗಳು ಸುರಕ್ಷಿತರಾಗಿಲ್ಲ ಎಂದು ಹೇಳಿದ್ದಾರೆ.

ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಇದೇ ಪರಿಸ್ಥಿತಿ ಮುಂದುವರಿದರೆ ಪಶ್ಚಿಮ ಬಂಗಾಳ ಜಮ್ಮು ಕಾಶ್ಮೀರವಾಗಿ ಬಿಡುತ್ತದೆ. ಘನಶ್ಯಾಮ ಸಿಂಗ್ ಅವರ ಹೆಸರಿನಲ್ಲಿ ಕಟ್ಟಡವಿರಬೇಕಿತ್ತು ಆದರೆ ಅಲ್ಲಿ ಮುಸ್ಲಿಮರು ವಾಸಿಸುತ್ತಿದ್ದಾರೆ. ಹೊರಗಿನಿಂದ ದೇಶದ ಒಳಗೆ ಹೊಕ್ಕಿರುವ ದೇಶದ್ರೋಹಿಗಳು ಮತ್ತು ಉಗ್ರರು ಮೋದಿಯವರ ನೇತೃತ್ವದ ಸರ್ಕಾರಕ್ಕೆ ಅಂಜಿ ಹೊರಹೋಗಬೇಕಾಗಿ ಬರುತ್ತದೆ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರ ಹೇಳಿಕೆಯಲ್ಲಿ 'ಶೂರ್ಪನಖಿ'
ಮಮತಾ ಬ್ಯಾನರ್ಜಿಯವರನ್ನು ಸುರೇಂದ್ರ ಸಿಂಗ್ ಶೂರ್ಪನಖಿ ಎಂದು ಕರೆದಿದ್ದಾರೆ. ಆದರೆ ಬಿಜೆಪಿ ನಾಯಕರು ವಿಪಕ್ಷದಲ್ಲಿರುವ ಮಹಿಳಾ ನಾಯಕಿಯರನ್ನು ಶೂರ್ಪನಖಿಗೆ ಹೋಲಿಸುತ್ತಿರುವುದು ಇದೇ ಮೊದಲೇನೂ ಅಲ್ಲ.

ಈ ಹಿಂದೆ ಅಹಲಾಬಾದ್‍ನ ಪ್ರೀತಂ ನಗರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ನಾಗರಿಕ ವಿಮಾನಯಾನ ಸಚಿವ ನಂದ ಗೋಪಾಲ್ ಗುಪ್ತಾ ಅವರು  ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರು ರಾವಣ ಸೋದರಿ ಶೂರ್ಪನಖಿ ಎಂದು ಹೇಳಿದ್ದರು.
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಕಲಿಯುಗದ ರಾವಣನಂತೆ, ಇವರೊಂದಿಗೆ ಕೈಜೋಡಿಸಲು ಮುಂದಾಗಿರುವ ಮಾಯಾವತಿ ಶೂರ್ಪನಖಿ ಎಂದು ಹೇಳಿದ ಅವರು ನರೇಂದ್ರ ಮೋದಿಯನ್ನು ಶ್ರೀರಾಮ ಮತ್ತು ಯೋಗಿ ಆದಿತ್ಯನಾಥರನ್ನು ಹನುಮಂತನಿಗೆ ಹೋಲಿಸಿದ್ದರು.

ಸಂಸತ್ತಿನಲ್ಲಿ ಶೂರ್ಪನಖಿಯನ್ನು ನೆನಪಿಸಿದ ರೇಣುಕಾ ನಗು

<br/>&#13; ರಾಷ್ಟ್ರಪತಿ ಭಾಷಣಕ್ಕೆ ವಂದನೆಗಳನ್ನು ಹೇಳುವ ಕುರಿತು ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಪ್ರಧಾನಿ <a href="http://www.prajavani.net/news/article/2018/02/09/552858.html" target="_blank">ನರೇಂದ್ರ ಮೋದಿ</a>ಯವರು ಮಾತನಾಡುತ್ತಿದ್ದಾಗ ಸಂಸದೆಯಾಗಿದ್ದ <a href="http://www.prajavani.net/news/article/2018/02/12/553551.html" target="_blank">ರೇಣುಕಾ ಚೌಧರಿ</a> ಗಹಗಹಿಸಿ ನಕ್ಕಿದ್ದರು. ಆ ವೇಳೆ ಸಭಾಪತಿ ವೆಂಕಯ್ಯ ನಾಯ್ಡು ಅವರು, ರೇಣುಕಾ ಅವರನ್ನುದ್ದೇಶಿಸಿ ನಿಮಗೇನಾದರೂ ಸಮಸ್ಯೆ ಇದ್ದರೆ ವೈದ್ಯರ ಬಳಿ ಹೋಗಿ ಎಂದು ಎಚ್ಚರಿಕೆ ನೀಡಿದ್ದರು. ಆಗ ಸಭಾಪತಿಯವರನ್ನು ತಡೆದ ಮೋದಿ ರೇಣುಕಾ ಅವರನ್ನು ತಡೆಯಬೇಡಿ. ಹಲವು ವರ್ಷಗಳ ಹಿಂದೆ ರಾಮಾಯಣ ಧಾರವಾಹಿಯಲ್ಲಿ ಈ ರೀತಿಯ ನಗುವನ್ನು ನೋಡಿದ್ದೆ. ಇಷ್ಟು ವರ್ಷಗಳ ನಂತರ ಅದನ್ನು ಮತ್ತೆ ಕೇಳುವ ಅದೃಷ್ಟ ಬಂದಿದೆ ಎಂದು ಹಾಸ್ಯ ಮಾಡಿದ್ದರು.</p><p>ಇದಾದ ನಂತರ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ರಾಮಾಯಣ ಧಾರವಾಹಿಯಲ್ಲಿ ಶೂರ್ಪನಖಿ ನಗುತ್ತಿರುವ ವಿಡಿಯೊ ಮತ್ತು ಮೋದಿಯವರು ಮಾತನಾಡಿದ್ದ ವಿಡಿಯೊವನ್ನು ಸೇರಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್  ಹಾಕಿದ್ದರು. ಈ ಆಕ್ಷೇಪಾರ್ಹ ಪೋಸ್ಟ್ ವಿರುದ್ಧ  ರೇಣುಕಾ ನೋಟಿಸ್ ಜಾರಿ ಮಾಡಿ ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ನಿಲುವಳಿ ಮಂಡಿಸಿದ್ದರು.</p><p><strong>ವಿವಾದಿತ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು ಸುರೇಂದ್ರ ಸಿಂಗ್</strong></p><p>ಇತ್ತೀಚೆಗೆ <a href="http://www.prajavani.net/news/article/2018/04/12/565381.html" target="_blank">ಉನ್ನಾವ್ ಪ್ರಕರಣ</a>ದ ಬಗ್ಗೆ ಮಾತನಾಡಿದ್ದ <a href="http://www.prajavani.net/news/article/2018/02/27/556506.html" target="_blank">ಸುರೇಂದ್ರ ಸಿಂಗ್</a> ‘ಎರಡು–ಮೂರು ಮಕ್ಕಳ ತಾಯಿ ಮೇಲೆ ಯಾರೂ ಅತ್ಯಾಚಾರ ಎಸಗುವುದಿಲ್ಲ’ ಎಂಬ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು.</p><p> </p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT