ಭಜನೆ: ಶಿವಳ್ಳಿ ಸಂಪನ್ನದವರಿಂದ ಮತ್ತು ಮುಳ್ಯ ಶ್ರೀ ಮಹಾಗಣಪತಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಬಳಿಕ ಸುಬ್ರಹ್ಮಣ್ಯದ ಯಜ್ಞೇಶ್ ಆಚಾರ್ ಮತ್ತು ಬಳಗದವರಿಂದ ಭಕ್ತಿ ಸಂಗೀತ, ಸುಳ್ಯದ ಶ್ರೀ ಗುರುರಾಯರ ಬಳಗದ ಪುಟಾಣಿಗಳಿಂದ ಪ್ರಕಾಶ್ ಮೂಡಿತ್ತಾಯರ ಪರಿಕಲ್ಪನೆ ಮತ್ತು ನಿರ್ದೇಶನ, ಯಕ್ಷ ನಾಟ್ಯ ಸಂಯೋಜನೆ ವಾಸುದೇವ ರೈ, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಭರತನಾಟ್ಯ ಸಂಯೋಜನೆ, ಕೃಷ್ಣಪ್ಪ ಬಂಬಿಲ ಅವರು ನಾಟಕ ಸಂಯೋಜನೆಗೊಳಿಸಿದ ದಶಾವತಾರ ಯಕ್ಷ- ಭರತ-ನಾಟಕ ನಡೆಯಿತು.