ಕಾಂಗ್ರೆಸ್ ಮುಖಂಡ ರಾಮನಹಳ್ಳಿ ಗೋಪಾಲ್ ಮಾತನಾಡಿ ‘ಎ.ಮಂಜು ಅವರ ತಂದೆ ಅಳಗಿರಿರವರು ಬೈರಮಂಗಲ ಕೆರೆಗೆ ಅಣೆಕಟ್ಟು ನಿರ್ಮಾಣ ಕಾಮಗಾರಿ ಮಾಡುವ ಸಮಯದಲ್ಲಿ ತಮಿಳುನಾಡಿನಿಂದ ವಲಸೆ ಬಂದು ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು. ನಂತರ ರಾಮನಹಳ್ಳಿಯ ಗೌರಮ್ಮ ಎಂಬುವರನ್ನು ವಿವಾಹವಾಗಿ ಇಲ್ಲೇ ನೆಲೆ ಕಂಡುಕೊಂಡರು, ಹೀಗಾಗಿ ಎ.ಮಂಜುರವರ ತಂದೆ ತಮಿಳುನಾಡು ಮೂಲದವರು ಎಂಬ ವಿಚಾರ ಗುಪ್ತವಾಗೇನೂ ಉಳಿದಿಲ್ಲ. ಇದನ್ನೇ ಬಾಲಕೃಷ್ಣರವರೂ ಹೇಳಿದ್ದಾರೆ’ ಎಂದರು.