ತುಮಕೂರು ನಗರ ಕ್ಷೇತ್ರಕ್ಕೆ ಶಾಸಕ ಡಾ.ರಫೀಕ್ ಅಹಮ್ಮದ್ ಮಂಗಳವಾರ ಸಹ ಮತ್ತೊಂದು ನಾಮಪತ್ರ ಸಲ್ಲಿಸಿದರು. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಬಾಬಾಜಾನ್, ಜೆಡಿಯುನಿಂದ ವೀರಪ್ಪದೇವರು ಆರ್.ಎಸ್, ಸ್ವತಂತ್ರ ಅಭ್ಯರ್ಥಿಗಳಾಗಿ ರೆಹಮತ್ ಷರೀಫ್, ಸೈಯದ್ ನಾಜಿದ್ ಅಹ್ಮದ್, ಆರ್. ನಾಗರಾಜು ನಾಮಪತ್ರ ಸಲ್ಲಿಸಿದರು. ಫೆಡರಲ್ ಕಾಂಗ್ರೆಸ್ ಆಫ್ ಇಂಡಿಯಾದಿಂದ ರೇಶ್ಮಾ ಮೇರಿಯಂ, ಸಾಮಾನ್ಯ ಜನತಾ ಪಕ್ಷದಿಂದ ತಿಪ್ಪೇಸ್ವಾಮಿ, ಕರ್ನಾಟಕ ಜನತಾ ಪಕ್ಷದಿಂದ ರಾಜು, ರಾಷ್ಟ್ರೀಯ ಮಾನವ ವಿಕಾಸ ಪಕ್ಷದಿಂದ ಮಂಜುಳಾ ಉಮೇದುವಾರಿಕೆ ಸಲ್ಲಿಸಿದರು.