ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಲಸಿಗರ ಕಾರುಬಾರು ಜೋರಾಗಿದೆ. ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳೂ ಬೇರೆ ಪಕ್ಷಗಳಿಂದ ಬಂದ ನಾಯಕರಿಗೆ ಮಣೆ ಹಾಕಿವೆ.
ಈ ಬಾರಿ ಪಕ್ಷಾಂತರ ಮಾಡಿರುವ 60ಕ್ಕೂ ಹೆಚ್ಚು ಮಂದಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಿಕೆಟ್ ಸಿಗದ ಕಾರಣಕ್ಕೆ ಪಕ್ಷದ ನಾಯಕತ್ವದ ವಿರುದ್ಧ ಮುನಿಸಿಕೊಂಡು ಬೇರೆ ಪಕ್ಷಕ್ಕೆ ಹೋಗಿ ಟಿಕೆಟ್ ಗಿಟ್ಟಿಸಿಕೊಂಡವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಕೊನೇ ಕ್ಷಣದಲ್ಲಿ ಪಕ್ಷ ಸೇರಿದವರಿಗೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಟಿಕೆಟ್ ನೀಡಿವೆ.
ಅದಲು–ಬದಲು: ಕೆಲ ಕ್ಷೇತ್ರಗಳಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿದ್ದ ಅಭ್ಯರ್ಥಿಗಳ ಪಕ್ಷಗಳು ಅದಲು ಬದಲಾಗಿವೆ. ನಾಗಮಂಗಲದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸುರೇಶ್ ಗೌಡ, ಜೆಡಿಎಸ್ನಿಂದ ಚೆಲುವರಾಯಸ್ವಾಮಿ ಅಭ್ಯರ್ಥಿಗಳಾಗಿದ್ದರು. ಈ ಸಲ ಸುರೇಶ್ ಗೌಡ ಜೆಡಿಎಸ್ನಿಂದ ಚೆಲುವರಾಯಸ್ವಾಮಿ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿದ್ದಾರೆ. ಪುಲಕೇಶಿ ನಗರದಲ್ಲಿ ಕಳೆದ ಬಾರಿ ಜೆಡಿಎಸ್ನಿಂದ ಗೆದ್ದಿದ್ದ ಅಖಂಡ ಶ್ರೀನಿವಾಸಮೂರ್ತಿ ಈ ಬಾರಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಪ್ರಸನ್ನ ಕುಮಾರ್ ಈ ಬಾರಿ ಜೆಡಿಎಸ್ ಹುರಿಯಾಳು.
ಅಫಜಲಪುರದಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದ ಮಾಲೀಕಯ್ಯ ಗುತ್ತೇದಾರ ಈ ಬಾರಿ ಬಿಜೆಪಿ ಅಭ್ಯರ್ಥಿ. ಅವರೆದುರು ಸ್ಪರ್ಧಿಸಿ ಸೋತಿದ್ದ ಬಿಜೆಪಿಯ ಎಂ.ವೈ. ಪಾಟೀಲ ಈ ಬಾರಿ ಕಾಂಗ್ರೆಸ್ನಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಮತ್ತೆ ಪಕ್ಷಾಂತರ ಮಾಡಿದ ಅವರು ಮುದ್ದೇಬಿಹಾಳದಲ್ಲಿ ಬಿಜೆಪಿ ಅಭ್ಯರ್ಥಿ.
ಮಹಾಲಕ್ಷ್ಮಿ ಬಡಾವಣೆಯಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ನ ಕೆ.ಗೋಪಾಲಯ್ಯ ಅವರ ವಿರುದ್ಧ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ನೆ.ಲ.
ನರೇಂದ್ರಬಾಬು ಈ ಬಾರಿ ಬಿಜೆಪಿಯಿಂದ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.
ಕಳೆದ ಬಾರಿ ಪಕ್ಷೇತರರಾಗಿ ಗೆದ್ದು ಬಂದಿದ್ದ ಕಾರವಾರದ ಸತೀಶ್ ಸೈಲ್, ಭಟ್ಕಳದ ಮಂಕಾಳ ಸುಬ್ಬವೈದ್ಯ ಹಾಗೂ ಮುಳಬಾಗಲು ಕ್ಷೇತ್ರದ ಕೊತ್ತೂರು ಮಂಜುನಾಥ್ ಈ ಬಾರಿ ಕೈ ಚಿಹ್ನೆಯಲ್ಲಿ ಕಣಕ್ಕಿಳಿದಿದ್ದಾರೆ. ಗೂಳಿಹಟ್ಟಿ ಶೇಖರ್ ಹೊಸದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ.
ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ನ ಕಿಮ್ಮನೆ ರತ್ನಾಕರ ಅವರ ವಿರುದ್ಧ ಸೋತಿದ್ದ ಕೆ.ಜೆ.ಪಿ ಅಭ್ಯರ್ಥಿ ಆರ್.ಎಂ. ಮಂಜುನಾಥ ಗೌಡ ಕಾಂಗ್ರೆಸ್ ಸೇರಿದ್ದರು. ಕೊನೇ ಕ್ಷಣದಲ್ಲಿ ಮತ್ತೆ ಪಕ್ಷ ಬದಲಿಸಿದ ಅವರು ಈ ಬಾರಿ ಇಲ್ಲಿ ಜೆಡಿಎಸ್ ಅಭ್ಯರ್ಥಿ.
ಮರಳಿ ಗೂಡಿಗೆ: ಕೆಲವು ನಾಯಕರು ಈ ಬಾರಿ ಮಾತೃಪಕ್ಷಕ್ಕೆ ಮರಳಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಕೃಷ್ಣಯ್ಯ ಶೆಟ್ಟಿ ಈ ಸಲ ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿ. ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಗೆ ಮರಳಿದ್ದು, ವಿಜಯಪುರ ನಗರದಿಂದ ಕಣಕ್ಕಿಳಿಯಲಿದ್ದಾರೆ. ಕುಂದಾಪುರದಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿ ಮತ್ತೆ ಬಿಜೆಪಿ ಅಭ್ಯರ್ಥಿ.
ಕಣದಲ್ಲಿರುವ ಪಕ್ಷಾಂತರಿಗಳು
ಕಾಂಗ್ರೆಸ್ನಿಂದ ಸ್ಪರ್ಧಿಸುವವರು
ಹೆಸರು; ಸ್ಪರ್ಧಿಸುವ ಕ್ಷೇತ್ರ; ಹಿಂದೆ ಇದ್ದ ಪಕ್ಷ
ಚೆಲುವರಾಯಸ್ವಾಮಿ; ನಾಗಮಂಗಲ; ಜೆಡಿಎಸ್
ಎಚ್.ಸಿ. ಬಾಲಕೃಷ್ಣ; ಮಾಗಡಿ; ಜೆಡಿಎಸ್
ಅಖಂಡ ಶ್ರೀನಿವಾಸಮೂರ್ತಿ; ಪುಲಕೇಶಿ ನಗರ; ಜೆಡಿಎಸ್
ಭೀಮಾನಾಯ್ಕ; ಹಗರಿಬೊಮ್ಮನಹಳ್ಳಿ; ಜೆಡಿಎಸ್
ರಮೇಶ ಬಂಡಿಸಿದ್ಧೇಗೌಡ; ಶ್ರೀರಂಗಪಟ್ಟಣ; ಜೆಡಿಎಸ್
ಜಮೀರ್ ಅಹಮದ್ ಖಾನ್; ಚಾಮರಾಜಪೇಟೆ; ಜೆಡಿಎಸ್
ಇಕ್ಬಾಲ್ ಅನ್ಸಾರಿ; ಗಂಗಾವತಿ; ಜೆಡಿಎಸ್
ವಿಠಲ ಕಟಕದೊಂಡ; ನಾಗಠಾಣ; ಬಿಜೆಪಿ
ಬಿ.ನಾಗೇಂದ್ರ; ಬಳ್ಳಾರಿ ಗ್ರಾಮಾಂತರ; ಪಕ್ಷೇತರ
ಆನಂದ ಸಿಂಗ್; ವಿಜಯನಗರ (ಬಳ್ಳಾರಿ); ಬಿಜೆಪಿ
ಅನಿಲ್ ಸಿ. ಮಾದು; ಎಚ್.ಡಿ.ಕೋಟೆ; ಜೆಡಿಎಸ್
ಅಶೋಕ್ ಖೇಣಿ; ಬೀದರ್ ದಕ್ಷಿಣ; ಕನ್ನಡ ಮಕ್ಕಳ ಪಕ್ಷ
ಬಿ.ಆರ್.ಪಾಟೀಲ; ಆಳಂದ; ಕೆಜೆಪಿ
ಸತೀಶ್ ಸೈಲ್; ಕಾರವಾರ; ಪಕ್ಷೇತರ
ಮಾಂಕಾಳ ಸುಬ್ಬವೈದ್ಯ; ಭಟ್ಕಳ; ಪಕ್ಷೇತರ
ಕೊತ್ತೂರು ಮಂಜುನಾಥ್; ಮುಳಬಾಗಲು; ಪಕ್ಷೇತರ
ಎಂ.ವೈ.ಪಾಟೀಲ; ಅಫಜಲಪುರ; ಬಿಜೆಪಿ
ತಲ್ಲೂರು ರಾಜ; ಸೊರಬ; ಬಿಜೆಪಿ
ಬಿಜೆಪಿಯಿಂದ ಸ್ಪರ್ಧಿಸುವವರು
ಬಿ.ಶಿವರಾಜ ಪಾಟೀಲ; ರಾಯಚೂರು; ಜೆಡಿಎಸ್
ಮಾನಪ್ಪ ವಜ್ಜಲ್; ಲಿಂಗಸುಗೂರು; ಜೆಡಿಎಸ್
ಮಲ್ಲಿಕಾರ್ಜುನ ಖೂಬಾ; ಬಸವಕಲ್ಯಾಣ; ಜೆಡಿಎಸ್
ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ; ಪಕ್ಷೇತರ
ಮಾಲೀಕಯ್ಯ ಗುತ್ತೇದಾರ; ಅಫಜಲಪುರ; ಕಾಂಗ್ರೆಸ್
ಕುಮಾರ್ ಬಂಗಾರಪ್ಪ, ಸೊರಬ; ಕಾಂಗ್ರೆಸ್
ಎ.ಎಸ್.ಪಾಟೀಲ ನಡಹಳ್ಳಿ; ಮುದ್ದೇಬಿಹಾಳ; ಕಾಂಗ್ರೆಸ್ ಮತ್ತು ಜೆಡಿಎಸ್
ನಿಡಸಾಲೆ ಶಿವಣ್ಣ; ಮಂಡ್ಯ; ಜೆಡಿಎಸ್
ಸಿ.ಪಿ.ಯೋಗೇಶ್ವರ್; ಚನ್ನಪಟ್ಟಣ; ಕಾಂಗ್ರೆಸ್
ಬಸನಗೌಡ ಪಾಟೀಲ ಯತ್ನಾಳ; ವಿಜಯಪುರ ನಗರ; ಪಕ್ಷೇತರ
ಎಸ್.ಸತೀಶ್ (ಸಂದೇಶ್ ಸ್ವಾಮಿ); ನರಸಿಂಹರಾಜ; ಜೆಡಿಎಸ್;
ಎನ್.ವೈ.ಗೋಪಾಲಕೃಷ್ಣ; ಕೂಡ್ಲಿಗಿ; ಕಾಂಗ್ರೆಸ್
ಪಿ.ರಾಜೀವ; ಕುಡಚಿ; ಬಿಎಸ್ಆರ್ ಕಾಂಗ್ರೆಸ್
ನೆ.ಲ.ನರೇಂದ್ರಬಾಬು; ಮಹಾಲಕ್ಷ್ಮಿ ಬಡಾವಣೆ; ಕಾಂಗ್ರೆಸ್
ಗುರುಪಾಟೀಲ ಶಿರವಾಳ; ಶಹಾಪುರ; ಕೆಜೆಪಿ
ಸುರೇಶ್ ಬಾಬು; ಕಂಪ್ಲಿ; ಬಿಎಸ್ಆರ್ ಕಾಂಗ್ರೆಸ್;
ಗೂಳಿಹಟ್ಟಿ ಶೇಖರ್; ಹೊಸದುರ್ಗ; ಪಕ್ಷೇತರ
ಪ್ರವೀಣ್ ಪಟೇಲ್; ಭದ್ರಾವತಿ; ಕಾಂಗ್ರೆಸ್
ಎಚ್.ಆರ್.ಗವಿಯಪ್ಪ; ವಿಜಯನಗರ; ಕಾಂಗ್ರೆಸ್
ಕೃಷ್ಣಯ್ಯ ಶೆಟ್ಟಿ; ಮಾಲೂರು; ಕಾಂಗ್ರೆಸ್
ಜೆಡಿಎಸ್ನಿಂದ ಸ್ಪರ್ಧಿಸುವವರು
ಬಿ.ಪ್ರಸನ್ನ ಕುಮಾರ್; ಪುಲಕೇಶಿನಗರ; ಕಾಂಗ್ರೆಸ್
ರೇವುನಾಯಕ ಬೆಳಮಗಿ; ಕಲಬುರ್ಗಿ ಗ್ರಾಮೀಣ; ಬಿಜೆಪಿ
ಎಸ್.ಕೆ.ಬೆಳ್ಳುಬ್ಬಿ, ಬಸವನ ಬಾಗೇವಾಡಿ; ಬಿಜೆಪಿ
ಪಿ.ರಮೇಶ್; ಸಿ.ವಿ.ರಾಮನ್ ನಗರ; ಕಾಂಗ್ರೆಸ್
ಪ್ರಭಾಕರ ರೆಡ್ಡಿ; ಬೆಂಗಳೂರು ದಕ್ಷಿಣ; ಕಾಂಗ್ರೆಸ್
ಹೇಮಚಂದ್ರ ಸಾಗರ್; ಚಿಕ್ಕಪೇಟೆ; ಬಿಜೆಪಿ
ಜಿ.ಎಚ್.ರಾಮಚಂದ್ರ; ರಾಜರಾಜೇಶ್ವರಿ ನಗರ; ಬಿಜೆಪಿ
ಅಲ್ತಾಫ್; ಚಾಮರಾಜಪೇಟೆ; ಕಾಂಗ್ರೆಸ್
ಎಚ್.ಎಂ.ಕೃಷ್ಣಮೂರ್ತಿ ರಾಜಾಜಿನಗರ; ಕಾಂಗ್ರೆಸ್
ಎ.ಮಂಜುನಾಥ್; ಮಾಗಡಿ; ಕಾಂಗ್ರೆಸ್
ರವೀಂದ್ರ ಶ್ರೀಕಂಠಯ್ಯ; ಶ್ರೀರಂಗಪಟ್ಟಣ; ಕಾಂಗ್ರೆಸ್
ಸುರೇಶ ಗೌಡ; ನಾಗಮಂಗಲ; ಕಾಂಗ್ರೆಸ್
ಆರ್.ಎಂ.ಮಂಜುನಾಥ ಗೌಡ; ತೀರ್ಥಹಳ್ಳಿ; ಕಾಂಗ್ರೆಸ್
ಶಿವಾನಂದ ಅಂಬಡಗಟ್ಟಿ; ಕಲಘಟಗಿ; ಬಿಜೆಪಿ
ಎಂ.ಬಸವರಾಜ್ ನಾಯ್ಕ; ಮಾಯಕೊಂಡ; ಬಿಜೆಪಿ
ಶಶಿಕುಮಾರ್; ಹೊಸದುರ್ಗ; ಕಾಂಗ್ರೆಸ್
ಕೊಟ್ರೇಶ್; ಹರಪನಹಳ್ಳಿ; ಬಿಜೆಪಿ
ಬಾಬಾಸಾಹೇಬ ಪಾಟೀಲ; ಕಿತ್ತೂರು; ಕಾಂಗ್ರೆಸ್
ಶಿವನಗೌಡ ಪಾಟೀಲ; ಬೆಳಗಾವಿ ಗ್ರಾಮೀಣ; ಕಾಂಗ್ರೆಸ್
ಆನಂದ ಅಸ್ನೋಟಿಕರ್; ಅಂಕೋಲಾ; ಬಿಜೆಪಿ
ಮಂಗಳಾದೇವಿ ಬಿರಾದಾರ; ಮುದ್ದೇಬಿಹಾಳ; ಬಿಜೆಪಿ
ದೀಪಕ್ ಕುಮಾರ್ ಸಿಂಗ್; ವಿಜಯನಗರ; ಕಾಂಗ್ರೆಸ್
ಎಸ್.ಕೃಷ್ಣಾ ನಾಯ್ಕ್; ಹಗರಿಬೊಮ್ಮನಹಳ್ಳಿ; ಕಾಂಗ್ರೆಸ್
ಪ್ರಕಾಶ ಖಂಡ್ರೆ, ಭಾಲ್ಕಿ, ಬಿಜೆಪಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.