‘ನಮ್ಮ ಮನೆ ಪ್ರದೇಶದಲ್ಲಿ ಚರಂಡಿ ಪೈಪ್ ಲೈನ್ಗಳನ್ನು ಸೂಕ್ತ ರೀತಿಯಲ್ಲಿ ಅಳವಡಿಸಿಲ್ಲ. ಇದರಿಂದ ಮಳೆಗಾಲದಲ್ಲಿ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ 2012ರಿಂದ ನಾವು ಕಟ್ಟಿರುವ ಮಾಸಿಕ ಕಂದಾಯವನ್ನು ವಾಪಸು ನೀಡಬೇಕು. ನಮಗಾಗಿರುವ ನಷ್ಟಕ್ಕೆ ₹5ಲಕ್ಷ ಲುಕ್ಸಾನು ಭರಿಸಿಕೊಡಲು ಜಲಮಂಡಳಿಗೆ ನಿರ್ದೇಶಿಸಬೇಕು’ ಎಂದು ಬಾನು ಮಿತ್ರಾ ದಾವೆಯಲ್ಲಿ ಕೋರಿದ್ದರು.