ಎಚ್ಬಿಆರ್ ಬಡಾವಣೆಯಲ್ಲಿ ದೂರುದಾರರ ಮನೆ ಇದೆ. ಹಸಿರು ಬಣ್ಣದ ಬಟ್ಟೆ ತೊಟ್ಟು ಅಲ್ಲಿಗೆ ಹೋಗಿದ್ದ ವ್ಯಕ್ತಿಯೊಬ್ಬ, ಜ್ಯೋತಿಷಿ ಎಂದು ಪರಿಚಯಿಸಿಕೊಂಡಿದ್ದ. ಆತನನ್ನು ನಂಬಿದ್ದ ಮಹಿಳೆ, ಮನೆಯೊಳಗೆ ಕರೆದಿದ್ದರು. ಮನೆಯ ವಾಸ್ತು ಸರಿ ಇಲ್ಲವೆಂದು ಹೇಳಿದ್ದ ಆತ, ‘ನಿಮ್ಮ ಪತಿಗೆ ಗಂಡಾಂತರವಿದೆ. ವಿಶೇಷ ಪೂಜೆ ಮಾಡದಿದ್ದರೆ ಸತ್ತು ಹೋಗುತ್ತಾರೆ’ ಎಂದು ಹೆದರಿಸಿದ್ದ. ಆಗ, ಪೂಜೆ ಮಾಡಿಸಲು ಮಹಿಳೆ ಒಪ್ಪಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.