ಆರೋಪಿ ವಿಶಾಲ್, ಆಟೊ ಚಾಲಕ. ಆತನ ಆಟೊದಲ್ಲೇ ಸುತ್ತಾಡಿ ಆರೋಪಿಗಳು ಈ ಕೃತ್ಯ ಎಸಗುತ್ತಿದ್ದರು. ಏ. 20ರಂದು ವಿಶಾಲ್ ಹಾಗೂ ಷಣ್ಮುಗಂ, ಆಟೊದಲ್ಲೇ ನ್ಯೂ ಹಾರಿಜನ್ ಕಾಲೇಜು ಬಳಿ ಹೋಗಿದ್ದರು. ಅಲ್ಲಿ ಹೋಗುತ್ತಿದ್ದ ಓಂಕಾರ್ ರೆಡ್ಡಿ ಎಂಬುವರನ್ನು ಅಡ್ಡಗಟ್ಟಿ ಡ್ರ್ಯಾಗರ್ ತೋರಿಸಿ, ಬೆದರಿಸಿ, ಮೊಬೈಲ್, ನಗದು ಸುಲಿಗೆ ಮಾಡಿದ್ದರು. ಏ. 24ರಂದು ನ್ಯೂ ಹಾರಿಜನ್ ಕಾಲೇಜು ಬಳಿ ಪುನಃ ಬಂದಿದ್ದ ಆರೋಪಿಗಳು, ಸುಲಿಗೆ ಮಾಡಲು ಕಾಯುತ್ತಿದ್ದರು. ಗಸ್ತಿನಲ್ಲಿದ್ದ ಸಿಬ್ಬಂದಿ, ಅವರನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದಾಗ ಸುಲಿಗೆ ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡರು ಎಂದರು.