ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಜಾಗೃತಿಗೆ ಹಾಸ್ಯ ಕಾರ್ಯಕ್ರಮ

ಸ್ವೀಪ್ ಸಮಿತಿ ಆಯೋಜನೆ; ನಗಿಸಲು ಬರಲಿದ್ದಾರೆ ಪ್ರಾಣೇಶ, ನರಸಿಂಹ ಜೋಶಿ, ಮಹಾಮನಿ
Last Updated 26 ಏಪ್ರಿಲ್ 2018, 7:20 IST
ಅಕ್ಷರ ಗಾತ್ರ

ಬಾಗಲಕೋಟೆ: ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿ ಆಯೋಜಿಸಿರುವ ಹಾಸ್ಯ ಸಂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಕಲಾವಿದರಾದ ಪ್ರಾಣೇಶ, ಯಶವಂತ ಸರದೇಶಪಾಂಡೆ, ನರಸಿಂಹ ಜೋಶಿ, ಪ್ರಹ್ಲಾದ ಆಚಾರ್ಯ, ಬಸವರಾಜ ಮಹಾಮನಿ ಸಾರ್ವಜನಿಕರನ್ನು ನಕ್ಕು ನಗಿಸಲಿದ್ದಾರೆ.

ಪ್ರತೀ ತಾಲ್ಲೂಕಿಗೆ ಮೂರರಂತೆ, ಜಿಲ್ಲೆಯಲ್ಲಿ 18 ಕಡೆ ಸಾರ್ವಜನಿಕ ನಗೆ ಕಾರ್ಯಕ್ರಮಗಳನ್ನು ಸ್ವೀಪ್ ಸಮಿತಿ ಆಯೋಜಿಸಿದೆ. ಏಪ್ರಿಲ್ 28, ಮೇ 3 ಹಾಗೂ 7ರಂದು ಬೀಳಗಿ ತಾಲ್ಲೂಕಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಅಲ್ಲಿ ಯಶವಂತ ಸರದೇಶಪಾಂಡೆ, ಬಸವರಾಜ ಮಹಾಮನಿ, ನರಸಿಂಹ ಜೋಶಿ ಪಾಲ್ಗೊಳ್ಳಲಿದ್ದಾರೆ.

ಏಪ್ರಿಲ್ 29, ಮೇ 5 ಹಾಗೂ 6ರಂದು ಜಮಖಂಡಿ ತಾಲ್ಲೂಕಿನಲ್ಲಿ ಆಯೋಜಿಸಲಾಗಿದೆ. ಅಲ್ಲಿನ ಜನರ ನಗಿಸಲು ಯಶವಂತ ಸರದೇಶಪಾಂಡೆ. ಪ್ರಹ್ಲಾದ ಆಚಾರ್ಯ, ಪ್ರಾಣೇಶ ಬರಲಿದ್ದಾರೆ. ಮುಧೋಳದಲ್ಲಿ ಏಪ್ರಿಲ್ 30, ಮೇ 2 ಹಾಗೂ 7ರಂದು ನಡೆಯಲಿದೆ. ಅಲ್ಲಿ ಯಶವಂತ ಸರದೇಶಪಾಂಡೆ, ಪ್ರಹ್ಲಾದ ಆಚಾರ್ಯ, ಬಸವರಾಜ ಮಹಾಮನಿ ಭಾಗವಹಿಸಲಿದ್ದಾರೆ.

ಬಾಗಲಕೋಟೆಯಲ್ಲಿ ಮೇ 1,2 ಹಾಗೂ 4ರಂದು ನಡೆಯುವ ಕಾರ್ಯಕ್ರಮಗಳಲ್ಲಿ ಪ್ರಾಣೇಶ, ಬಸವರಾಜ ಮಹಾಮನಿ, ನರಸಿಂಹ ಜೋಶಿ, ಬಾದಾಮಿಯಲ್ಲಿ ಮೇ 1,4 ಹಾಗೂ 6ರಂದು ನಡೆಯುವ ಹಾಸ್ಯ ಗೋಷ್ಠಿಯಲ್ಲಿ ಬಸವರಾಜ ಮಹಾಮನಿ, ಪ್ರಾಣೇಶ ಹಾಗೂ ಪ್ರಹ್ಲಾದ ಆಚಾರ್ಯ ಭಾಗಿಯಾಗಲಿದ್ದಾರೆ.

ಹುನಗುಂದದಲ್ಲಿ ಮೇ 3,5 ಮತ್ತು 6ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಾಣೇಶ, ಯಶವಂತ ಸರದೇಶಪಾಂಡೆ, ಪ್ರಹ್ಲಾದ ಆಚಾರ್ಯ ಪಾಲ್ಗೊಂಡು ಹಾಸ್ಯ ರಸದೌತಣದ ಜೊತೆಗೆ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ ಎಂದು ಸ್ವೀಪ್ ಸಮಿತಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT