ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ತಿರಸ್ಕೃತ, ಒಂದರ ಪರಿಶೀಲನೆ ಮುಂದಕ್ಕೆ

ವಿಧಾನಸಭಾ ಚುನಾವಣೆ: 6 ಕ್ಷೇತ್ರಗಳ 110 ಉಮೇದುವಾರಿಕೆಗಳು ಕ್ರಮಬದ್ಧ
Last Updated 26 ಏಪ್ರಿಲ್ 2018, 9:53 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿಧಾನಸಭೆ ಚುನಾವಣೆಗೆ ಉಮೇದುವಾರಿಕೆಗಾಗಿ ಸಲ್ಲಿಸಿದ್ದ ನಾಮಪತ್ರಗಳನ್ನು ಬುಧವಾರ ಪರಿಶೀಲಿಸಲಾಗಿದ್ದು, ಕ್ರಮಬದ್ಧವಾಗಿರದ 11 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಹೊಸದುರ್ಗ ವಿಧಾನಸಭಾ ಕ್ಷೇತ್ರದ ಒಬ್ಬ ಅಭ್ಯರ್ಥಿಯ ನಾಮಪತ್ರ ಪರಿಶೀಲನೆಯನ್ನು ಗುರುವಾರ(ಏ.26)ಕ್ಕೆ ಮುಂದೂಡಲಾಗಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ 84 ಅಭ್ಯರ್ಥಿಗಳ 110 ನಾಮಪತ್ರಗಳು ಕ್ರಮಬದ್ಧವಾಗಿವೆ.

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು 24 ನಾಮಪತ್ರ ಸಲ್ಲಿಸಿದ್ದು, 3 ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ. 14 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಬಿಜೆಪಿಯಿಂದ ಕೆ.ಪೂರ್ಣಿಮಾ, ಜೆಡಿಎಸ್‌ನಿಂದ ಡಿ.ಯಶೋಧರ, ಕಾಂಗ್ರೆಸ್‌ನಿಂದ ಡಿ.ಸುಧಾಕರ್, ಸಮಾಜವಾದಿಪಕ್ಷದಿಂದ ಡಾ.ಡಿ.ಎನ್.ನಾಗೇಂದ್ರಯ್ಯ, ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್ ಪಕ್ಷದಿಂದ ಮಹೇಶ್ ಆರ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಎಚ್.ಲೋಕೇಶ್, ಕರ್ನಾಟಕ ಜನತಾ ಪಕ್ಷದಿಂದ ಎನ್.ವಿಜಯಲಕ್ಷ್ಮಿ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದಿಂದ ಶಶಿಕಾಂತ್ ಸಿ.ಎಂ, ಪ್ರಜಾ ರೈತ ರಾಜ್ಯ ಪಕ್ಷದಿಂದ ಎ.ಶಿವಶಂಕರಪ್ಪ, ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯಿಂದ ಸಮೀವುಲ್ಲಾ, ಪಕ್ಷೇತರ ಅಭ್ಯರ್ಥಿಗಳಾದ ಎಚ್.ನಾರಾಯಣಭೋವಿ, ರಂಗಯ್ಯ ಎಸ್, ಎಸ್.ಆರ್.ರಂಗಸ್ವಾಮಿ, ಎಂ.ಪಿ.ಶ್ರೀರಂಗನಾಥ ಅವರ ನಾಮಪತ್ರಗಳು ಕ್ರಮಬದ್ಧವಾಗಿದೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳು 31 ನಾಮಪತ್ರಗಳನ್ನು ಸಲ್ಲಿಸಿದ್ದು ಇದರಲ್ಲಿ ನಾಲ್ಕು ನಾಮಪತ್ರಗಳು ತಿರಸ್ಕೃತಗೊಂಡಿವೆ. 24 ಅಭ್ಯರ್ಥಿಗಳ 37 ನಾಮಪತ್ರಗಳು ಕ್ರಮಬದ್ಧವಾಗಿವೆ.

ಬಿಜೆಪಿಯಿಂದ ಜಿ.ಎಚ್.ತಿಪ್ಪಾರೆಡ್ಡಿ, ಜೆಡಿಎಸ್ ಕೆ.ಸಿ.ವೀರೇಂದ್ರ, ಕಾಂಗ್ರೆಸ್ ಎಚ್.ಎ.ಷಣ್ಮುಖಪ್ಪ, ಸಾಮಾನ್ಯ ಜನತಾ ಪಕ್ಷದಿಂದ ಜಗದೀಶ್, ಸ್ವರಾಜ್ ಇಂಡಿಯಾ ಪಕ್ಷದಿಂದ ಡಾ.ದೊಡ್ಡಮಲ್ಲಯ್ಯ, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕರ ಪಕ್ಷದಿಂದ ಜಿ.ಎಸ್.ನಾಗರಾಜ್, ಕನ್ನಡ ಪಕ್ಷದಿಂದ ರಾಜಾ ಮದಕರಿನಾಯಕ, ಭಾರತೀಯ ಜನಶಕ್ತಿ ಕಾಂಗ್ರೆಸ್‌ನಿಂದ ಬಿ.ಈ.ಶ್ಯಾಂಸುಂದರ್ ಕುಲಕರ್ಣಿ, ಸಮಾಜವಾದಿ ಪಕ್ಷದಿಂದ ಕೆ.ಎಸ್.ಸರಸ್ವತಿ, ಆಲ್ ಇಂಡಿಯಾ ಎಂಪವರ್‌ಮೆಂಟ್ ಪಕ್ಷದಿಂದ ಸೈಯದ್ ಇಸ್ಮಾಯಿಲ್, ಕರ್ನಾಟಕ ಜನತಾ ಪಕ್ಷದಿಂದ ಹೆಚ್.ಎಂ.ಹನುಮಪ್ಪ, ಪಕ್ಷೇತರರಾದ ಎಂ.ಕಿರಣ್, ಎ.ಕೇಶವಮೂರ್ತಿ, ಗಣೇಶ, ಎಂ.ಟಿ.ಚಂದ್ರಣ್ಣ, ಎನ್.ಬಿ.ಟಿ.ಜಮೀರ್, ಪಿ.ಎಸ್.ಪುಟ್ಟಸ್ವಾಮಿ, ವಿ.ಎಸ್.ಭೂತರಾಜ, ಮಂಜುನಾಥ ಎನ್, ಸಿ.ಶಿವುಯಾದವ್, ಎನ್. ಸುರೇಶ್
ಇವರ ನಾಮಪತ್ರಗಳು ಕ್ರಮಬದ್ಧವಾಗಿದೆ.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳಿಂದ 26 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ 3 ನಾಮಪತ್ರಗಳು ತಿರಸ್ಕೃತಗೊಂಡು 22 ಅಭ್ಯರ್ಥಿಗಳ 23 ನಾಮಪತ್ರಗಳು ಕ್ರಮಬದ್ಧವಾಗಿವೆ. ಕಾಂಗ್ರೆಸ್‌ನಿಂದ ಎಚ್.ಆಂಜನೇಯ, ಬಿಜೆಪಿ ಎಂ.ಚಂದ್ರಪ್ಪ, ಜೆಡಿಎಸ್‌ನಿಂದ ಶ್ರೀನಿವಾಸ ಗದ್ದಿಗೆ ಟಿ, ರಿಪಬ್ಲಿಕನ್ ಸೇನಾ ಪಕ್ಷದಿಂದ ಎಸ್.ತಿಪ್ಪೇಸ್ವಾಮಿ, ಭಾರತೀಯ ಜನಶಕ್ತಿ ಕಾಂಗ್ರೆಸ್‌ನಿಂದ ದಯಾನಂದ ಟಿ, ಅಂಬೇಡ್ಕರ್ ಸಮಾಜ ಪಾರ್ಟಿಯಿಂದ ನಿರಂಜನ ಎ.ಡಿ. ಚೀಳಂಗಿ, ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿಯಿಂದ ಜಿ.ಎನ್.ಪರಮೇಶ, ಸಮಾಜವಾದಿ ಪಾರ್ಟಿಯಿಂದ ಎಸ್.ಮೀಟ್ಯಾನಾಯ್ಕ, ಜನತಾದಳ(ಸಂಯುಕ್ತ)ದಿಂದ ಎಚ್.ರಾಮಚಂದ್ರಪ್ಪ, ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯಿಂದ ಎಂ.ಎಚ್.ಶಶಿಧರ, ಪಕ್ಷೇತರರಾಗಿ ಎಚ್.ಆಂಜನೇಯ, ಎಂ.ದುರುಗೇಶಪ್ಪ, ಎ.ಬಸವರಾಜ, ಎಚ್.ವಿಠಲನಾಯ್ಕ, ಸಿ.ಟಿ.ವಿಶ್ವನಾಥ, ಬಿ.ಟಿ.ವೇಮಣ್ಣ, ಶಶಿಶೇಖರನಾಯ್ಕ, ಜಿ.ಶಾಂತಪ್ಪ, ಎಂ.ಹನುಮಕ್ಕ, ಹನುಮಂತಪ್ಪ ದುರ್ಗಾ, ಹೂಲಪ್ಪ ಆರ್, ಹೊಳೆಯಪ್ಪ ಕೆ. ಇವರುಗಳ ನಾಮಪತ್ರ ಕ್ರಮಬದ್ಧವಾಗಿದೆ.

ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು 21 ನಾಮಪತ್ರಗಳನ್ನು ಸಲ್ಲಿಸಿದ್ದು ಒಂದು ನಾಮಪತ್ರ ತಿರಸ್ಕೃತಗೊಂಡಿದೆ. ಉಳಿದ 20 ನಾಮಪತ್ರಗಳಲ್ಲಿ 19 ನಾಮಪತ್ರಗಳು ಕ್ರಮಬದ್ಧವಾಗಿದೆ. ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯಿಂದ ಸಲ್ಲಿಸಿರುವ ರಮೇಶ್‌ನಾಯ್ಕ ಇವರ ನಾಮಪತ್ರ ಪರಿಶೀಲನೆಯನ್ನು ಏ. 26ಕ್ಕೆ ಮುಂದೂಡಲಾಗಿದೆ.

ಬಿಜೆಪಿಯಿಂದ ಗೂಳಿಹಟ್ಟಿ ಡಿ.ಶೇಖರ್, ಕಾಂಗ್ರೆಸ್‌ನಿಂದ ಬಿ.ಜಿ.ಗೋವಿಂದಪ್ಪ, ಕೆ.ಜೆ.ಪಿ. ಪಕ್ಷದಿಂದ ಪ್ರಕಾಶಮೂರ್ತಿ, ಜಾತ್ಯತೀತ ಜನತಾದಳದಿಂದ ಶಶಿಕುಮಾರ್, ಕೆಪಿಜೆಪಿ ಮಂಜುನಾಥ ವಿ.ಬಂಡ್ರೆ, ಪಕ್ಷೇತರರಾಗಿ ಶಮಂತ್ ಎ.ಆರ್, ಎಂ.ಎಸ್.ಸತೀಶ್, ಎಂ.ಕೆ.ಬಸವರಾಜಪ್ಪ, ಜಿ.ಆರ್.ರೇವಣ್ಣ, ಎಂ.ಸಿ..ಧನಂಜಯ, ಬಿ.ಟಿ.ಗಿರೀಶ್, ಸಿ.ಎಸ್.ತ್ಯಾಗರಾಜನ್ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳಿಂದ 15 ನಾಮಪತ್ರ ಸಲ್ಲಿಕೆಯಾಗಿದ್ದು ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿವೆ. ಜೆಡಿಎಸ್ ನಿಂದ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಕಾಂಗ್ರೆಸ್‌ನಿಂದ ಬಿ.ಯೋಗೇಶ್‌ಬಾಬು, ಬಿಜೆಪಿಯಿಂದ ಬಿ.ಶ್ರೀರಾಮುಲು, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದಿಂದ ಕೆ.ರಾಘವೇಂದ್ರ, ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯಿಂದ ಪಿ.ಸುಮಲತ, ಪಕ್ಷೇತರ ಅಭ್ಯರ್ಥಿಗಳಾದ ಬಿ.ಗಿರೀಶ, ಎಸ್.ಚಂದ್ರಣ್ಣ,
ಎಸ್.ತಿಪ್ಪೇಸ್ವಾಮಿ, ಡಿ.ಎಚ್.ಪರಮೇಶ್ವರಪ್ಪ, ಎಸ್.ಪಿ.ರಾಜು ಇವರುಗಳ ನಾಮಪತ್ರ ಕ್ರಮಬದ್ಧವಾಗಿದೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ 4ಅಭ್ಯರ್ಥಿಗಳು 5 ನಾಮಪತ್ರ ಸಲ್ಲಿಸಿದ್ದು ಇದರಲ್ಲಿ ಎಲ್ಲಾ ನಾಲ್ಕು ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಬಿಜೆಪಿಯಿಂದ ಕೆ.ಟಿ.ಕುಮಾರಸ್ವಾಮಿ, ಕಾಂಗ್ರೆಸ್ ನಿಂದ ಟಿ.ರಘುಮೂರ್ತಿ, ಜೆಡಿಎಸ್‌ನಿಂದ ರವೀಶ್‌ಕುಮಾರ್, ಸ್ವರಾಜ್
ಇಂಡಿಯಾ ಪಕ್ಷದಿಂದ ಕೆ.ಪಿ.ಭೂತಯ್ಯ ನಾಮಪತ್ರ ಕ್ರಮಬದ್ದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT