ಸಪ್ತಪದಿ ಸಂಸ್ಥೆಯ ಸಂಚಾಲಕ ವೆಂಕಟರಮಣ ಬೆಳ್ಳಿ ಮಾತನಾಡಿ, ಸಪ್ತಪದಿ ಸಂಸ್ಥೆಯ ಆಶ್ರಯದಲ್ಲಿ 15 ನೇ ಲಗ್ನ ಇದಾಗಿದೆ. ನೇಪಾಳ ಗಡಿಯ ಹರ್ಷಿತಾ ಮಿಶ್ರಾ ನಮ್ಮವರಾಗಿದ್ದಾರೆ. ಎರಡೂವರೆ ಸಾವಿರ ಕಿ.ಮೀ. ದೂರದ ವಧು, ತಮ್ಮ ಬಂಧು ಬಳಗ ಬಿಟ್ಟು ನಮ್ಮ ಬಳಗ ಸೇರಿದ್ದಾರೆ. ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾದದ್ದು ನಮ್ಮ ಹೊಣೆ ಎಂದರು.