‘ಫ.ಗು.ಹಳಕಟ್ಟಿ ಅವರು ಬಸವಾದಿ ಶರಣರ ವಚನಗಳ ಸಂರಕ್ಷಣೆ ಮಾಡುವ ಮೂಲಕ ಜಂಗಮ ಸೇವೆ ಮಾಡಿದರೆ, ಮಲ್ಲಪ್ಪ ಸಿಂಹಾಸನ ಅವರು ಹಾಳುಕೊಂಪೆಯಾಗಿದ್ದ ಬಸವೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ಸ್ಥಾವರ ಸೇವೆ ಮಾಡಿದ್ದಾರೆ. ಇವರ ಸೇವಾ ಕೈಂಕರ್ಯ ಶ್ಲಾಘನೀಯ. ಮಲ್ಲಪ್ಪ ಸಿಂಹಾಸನ ಅವರು ಮಾಮಲೇದಾರ ಆಗಿದ್ದರೂ ತಮ್ಮ ಸೇವಾ ನಿವೃತ್ತಿ ನಂತರ ವಂತಿಗೆ ಸಂಗ್ರಹಿಸಿ ಭವ್ಯ ದೇವಸ್ಥಾನ ನಿರ್ಮಿಸಿದ್ದಾರೆ ಎಂದು ಹೇಳಿದರು.