ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದಂತೆ, ಚುನಾವಣಾ ಆಯೋಗವು ಹಳ್ಳಿ ಹಳ್ಳಿಗಳಿಗೆ ಹೋಗಿ, ‘ಕಣದಲ್ಲಿ ಸೂಕ್ತ ಎನಿಸುವ ಅಭ್ಯರ್ಥಿ ಇಲ್ಲ ಎಂದೆನಿಸಿದರೆ ನೋಟಾಕ್ಕೆ ಮತ ನೀಡಬಹುದು’ ಎಂದು ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು. ಆಯೋಗವೇ ಕ್ಷೇತ್ರವಾರು ತಂಡಗಳನ್ನು ರಚಿಸಿ ಈ ಕೆಲಸ ಮಾಡಬೇಕು.