ಚಂದ್ರಶೇಖರ್, ರವಿಕುಮಾರ್, ಮುನಿರಾಜು, ಮಹೇಶ್ ಮಾತನಾಡಿ, ಮುಖ್ಯ ರಸ್ತೆಯಿಂದ ಕೇವಲ 150 ಮೀಟರ್ ಅಂತರದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿ, ಎರಡೂ ಕಡೆ ಚರಂಡಿ ದುರಸ್ತಿ ಮಾಡಿದರೆ ಸಾಕು. ಈ ಕಾಮಗಾರಿಗೆ ಕನಿಷ್ಠ ₹10 ಲಕ್ಷ ಅನುದಾನ ಬೇಕಾಗುತ್ತದೆ. ಈ ಕಾಮಗಾರಿಗೆ ಉದ್ಘಾಟನೆಗೆ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಭೇಟಿ ನೀಡಬೇಕು ಎಂದು ಅಧಿಕಾರಿಗಳು, ಜಬಪ್ರತಿನಿಧಿಗಳ ಉದ್ಧಟತನದ ಮಾತು. ಮತಕ್ಕಾಗಿ ಪೀಡಿಸುವ ವಿವಿಧ ಪಕ್ಷಗಳ ಮುಖಂಡರು ಇಲ್ಲಿ ಪರಿಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಹೇಗೆ ಎಂಬುದು ಸ್ಥಳೀಯರ ಆಕ್ರೋಶ.