ಈ ಚಿತ್ರಕ್ಕೆ ಕತೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶಕರಾಗುತ್ತಿರುವವರು ಚಂದೂರ ಮಾರುತಿ. ಇವರು ಏಳು ವರ್ಷಗಳ ಕಾಲ ಬಿ.ಸುರೇಶ್ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಚಿತ್ರದ ಕಥೆಯಲ್ಲಿ, ಕರ್ತವ್ಯದಲ್ಲಿರುವ ಒಬ್ಬ ತಹಶೀಲ್ದಾರನ ಮಗ ಡಿಗ್ರಿ ವ್ಯಾಸಂಗ ಮಾಡುತ್ತಿರುತ್ತಾನೆ, ಒಂದು ದಿನ ಆತ ಅಪ್ಪನ ದುಡ್ಡು ಕದ್ದು ಓಡಿಹೋಗುತ್ತಾನೆ. ಆತ ಹೀಗೆ ಮಾಡುವುದು ಯಾವ ಕಾರಣಕ್ಕೆ, ಯಾವ ಉದ್ದೇಶಕ್ಕೆ ಎಂಬುದನ್ನು ಸಿನಿಮಾ ವೀಕ್ಷಿಸಿ ತಿಳಿಯಬೇಕಂತೆ.