ತಂದೆ, ತಾಯಿ, ಪತ್ನಿ ಹಾಗೂ ಇತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಊರ ಮಗನಿಗೆ ಸಂಬಂಧಿಕರು, ಗ್ರಾಮಸ್ಥರು ಕಣ್ಣೀರ ನಮನ ಸಲ್ಲಿಸಿದರು. ಜಿಟಿಜಿಟಿ ಮಳೆ ನಡುವೆಯೇ ತಂದೆ ದ್ಯಾವೇಗೌಡ ಅಂತಿಮ ವಿಧಿವಿಧಾನ ಪೂರೈಸಿದರು. ಯೋಧನ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಹಾಸನ ತಹಶೀಲ್ದಾರ್ ಯೋಧನ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.