‘ನಾಳೆ ನೀವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆ ನಡೆದಿದೆ’ ಎಂಬ ಸುದ್ದಿ ಇದೆಯಲ್ಲಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಸಿದ ಯಡಿಯೂರಪ್ಪ, ‘ನಮಗೆ ರಾಜ್ಯಪಾಲರ ಪತ್ರ ಬಂದ ಬಳಿಕ ತಿಳಿಸುತ್ತೇನೆ. ಅದರಲ್ಲಿ ಮುಚ್ಚಿಡುವುದೇನಿದೆ’ ಎಂದಷ್ಟೇ ಹೇಳಿ, ನಗು ಮುಖದಿಂದಲೇ ತೆರಳಿದರು.