ಹಲವು ಪ್ರಕ್ರಿಯೆಗಳ ಬಳಿಕ ಮೇ 15 ರಂದು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಾಲಕಿ ಮತ್ತು ಪೋಷಕರನ್ನು ಹಾಜರುಪಡಿಸಿ ಸಮಿತಿ ಆದೇಶದಂತೆ ಬಾಲಕಿಯನ್ನು ಪೋಷಕರ ವಶಕ್ಕೆ ಒಪ್ಪಿಸಲಾಯಿತು. ಪೋಷಕರು ಮತ್ತು ಬಾಲಕಿಯ ಪುನರ್ಮಿಲನಕ್ಕೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕೋಮಲಾ, ಸದಸ್ಯೆ ಗೀತಾ, ಯೋಗನಾಥ್, ಅನುಪಮಾ, ಕಾಂತರಾಜು ಸಾಕ್ಷಿಯಾದರು.