ಮಾವಿಗೆ ಮಿಶ್ರಫಲ
ಈ ಬಾರಿಯ ಮುಂಗಾರು ಪೂರ್ವ ಮಳೆಯಿಂದಾಗಿ ಮಾವಿನ ಫಸಲು ಉತ್ತಮವಾಗಿ ಬಂದಿದ್ದು, ಕಾಯಿಗಳು ಹೆಚ್ಚು ಗಾತ್ರಕ್ಕೆ ಹಿಗ್ಗಿವೆ. ಆದರೆ ಈಚಿನ ಮಳೆ ಗಾಳಿಯಿಂದಾಗಿ ಅಲ್ಲಲ್ಲಿ ಕಾಯಿ ಉದುರತೊಡಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.‘ಸದ್ಯ ಬೇಸಿಗೆ ಮಳೆ ಫಲಪ್ರದವಾಗಿದೆ. ಆದರೆ ಹೆಚ್ಚು ಮಳೆಯಾದರೆ ಕಾಯಿ ಉದುರುವ ಸಾಧ್ಯತೆಯೂ ಹೆಚ್ಚು. ಹೀಗಾಗಿ ರೈತರು ಆತಂಕದಿಂದಲೇ ಕಾಯಿಗಳನ್ನು ಕಿತ್ತು ಮಾರುಕಟ್ಟೆಗೆ ತರುತ್ತಿದ್ದಾರೆ. ಇದರಿಂದಾಗಿ ಅವರಿಗೆ ಯೋಗ್ಯ ಬೆಲೆ ಸಿಗದಂತಾಗಿದೆ’ ಎನ್ನುತ್ತಾರೆ ರಾಮನಗರ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದರಾಜು.