ಕಲಬುರ್ಗಿ: ಅಫಜಲಪುರ ತಾಲ್ಲೂಕು ದೇವಲ ಗಾಣಗಾಪುರ ದತ್ತಾತ್ರೇಯ ದೇವರ ದರ್ಶನಕ್ಕೆ ಬಂದಿದ್ದ ನಾಲ್ವರು ಭಕ್ತರು ಶನಿವಾರ ಅಸ್ವಸ್ಥಗೊಂಡಿದ್ದು, ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಮಹಾರಾಷ್ಟ್ರದ ಗುಲಾಬ್ ಪಾಗಿರೆ, ಕೇಸರಬಾಯಿ ಪಾಗಿರೆ, ಸುಧಾಕರ ಮಾಗುಲಕರ್ ಹಾಗೂ ಶಾರದಾ ಅಸ್ವಸ್ಥಗೊಂಡವರು.
‘ದೇವರ ದರ್ಶನ ಬಳಿಕ ಎಲ್ಲರೂ ಹೋಟೆಲ್ನಲ್ಲಿ ಊಟ ಮಾಡಿದ್ದಾರೆ. ಇದಾದ ಬಳಿಕ ಗಾಣಗಾಪುರ ಸಮೀಪದ ಸಂಗಮ ವೀಕ್ಷಣೆಗೆ ತೆರಳಿದ್ದಾರೆ. ಈ ವೇಳೆ ಮಾರ್ಗಮಧ್ಯೆಯೇ ಏಕಾಏಕಿ ಅಸ್ವಸ್ಥಗೊಂಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.