ಕಚ್ಚಾರಸ್ತೆಗಿಂತಲೂ ಕರಕಷ್ಟದ ರಸ್ತೆ ಇದು. ಈ ಮಾರ್ಗದಿಂದ ನಡೆದುಕೊಂಡು ಹೋಗುವ ಜನರಿಗೆ, ಬೈಕ್ ಹಾಗೂ ಇನ್ನಿತರೆ ತೆರೆದ ವಾಹನಗಳಲ್ಲಿ ಹೋಗುವವರಿಗೆ ದೂಳಿನ ಮಜ್ಜನವಾಗುತ್ತದೆ. ದೂಳಿನಿಂದ ಅವೃತವಾಗುವ ಈ ರಸ್ತೆಗೆ ಹೊಂದಿಕೊಂಡಿರುವ ಜನವಸತಿಗಳು ಸದಾ ಬಾಗಿಲು ಮುಚ್ಚಿಕೊಂಡು ಇರಬೇಕಾಗಿದೆ. ಇಡೀ ರಸ್ತೆಯು ಕಿತ್ತುಹೋಗಿ ಭಾರಿ ಅಗಲದ ತಗ್ಗುಗಳು ನಿರ್ಮಾಣವಾಗಿವೆ. ವಾಹನ ಸವಾರರು ತಗ್ಗುಗಳಲ್ಲಿ ರಸ್ತೆ ಹುಡುಕಿಕೊಂಡು ಸಾಗಬೇಕು. ಯಾಮಾರಿ ವಾಹನ ಓಡಿಸಿದರೆ, ವಾಹನಗಳು ಜಖಂ ಆಗುವುದಲ್ಲದೆ, ಆಯತಪ್ಪಿ ಅಪಘಾತಕ್ಕೀಡಾಗಬೇಕಾಗುತ್ತದೆ.