ಕುರಚಲು ಕಾಡಿನಂತಿರುವ ಸ್ಮಶಾನದ ಸುತ್ತಲೂ ಶ್ರೀ ಸಿದ್ಧಾರೂಢ ಆಶ್ರಮ ಮತ್ತು ಗ್ರಾಮದ ಮನೆಗಳು ಇವೆ. ಹಾಗಾಗಿ, ಗ್ರಾಮಸ್ಥರು ಆತಂಕ ಮತ್ತು ಭಯದಿಂದ ಕಾಲ ಕಳೆಯುವಂತಾಗಿದೆ. ಅಲ್ಲದೆ, ಕತ್ತಲಾದರೆ, ಗ್ರಾಮಸ್ಥರು ಹೊರಗೆ ಬರಲು ಹೆದರುತ್ತಾರೆ ಎಂದು ಸಿದ್ಧಾರೂಢ ಆಶ್ರಮದಲ್ಲಿರುವ ಹನುಮಂತಜ್ಜ ‘ಪ್ರಜಾವಾಣಿ’ಗೆ ಹೇಳಿದರು.