ಮಳೆಯಿಂದ ಹಿನ್ನಡೆ: ‘ಇದು ಕೇವಲ 100 ದಿನಗಳ ಪ್ರಕ್ರಿಯೆ. ಆದರೆ, 2 ಮಿ.ಮೀ.ಗಿಂತ ಹೆಚ್ಚು ಮಳೆ ಬಂದರೆ ಉತ್ಪಾದನೆಗೆ ಸ್ವಲ್ಪ ಹಿನ್ನಡೆಯಾಗುತ್ತದೆ. ಈ ಬಾರಿ ಬಂದ ಗಾಳಿ, ಮಳೆಯಿಂದಾಗಿ ಸದ್ಯ 8 ಸಾವಿರ ಟನ್ಗೆ ಉತ್ಪಾದನೆ ಬಂದು ನಿಂತಿದೆ’ ಎನ್ನುತ್ತಾರೆ ನಾಗರಬೈಲ್ ಉಪ್ಪು ಮಾಲೀಕರ ಸಹಕಾರ ಸಂಘದ ಅಧ್ಯಕ್ಷ ಅರುಣ್ ನಾಡಕರ್ಣಿ.