ನಗರದಲ್ಲಿ ಭಾನುವಾರ ಸಂತೆಯ ದಿನವಾಗಿದ್ದು, ಮಳೆಯಿಂದಾಗಿ ವ್ಯಾಪಾರಿಗಳು ರಸ್ತೆ ಬದಿ ತರಕಾರಿ, ಮೀನು ಇಡಲಾಗದೇ ಪರದಾಡಿದರು. ಹಾವೇರಿ, ರಾಣೆಬೆನ್ನೂರು, ಧಾರವಾಡ, ಬೆಳಗಾವಿ ಭಾಗದಿಂದ ಶನಿವಾರ ರಾತ್ರಿಯೇ ನಗರಕ್ಕೆ ಬಂದಿದ್ದ ವ್ಯಾಪಾರಿಗಳು ಕಷ್ಟ ಅನುಭವಿಸಿದರು. ಕೊತ್ತಂಬರಿ, ಉದ್ದಿನಬೇಳೆ, ಶೇಂಗಾ ಮುಂತಾದ ಬೇಳೆಕಾಳು
ಗಳು, ಒಣಮೆಣಸು ಮಳೆಯಲ್ಲಿ ನೆನೆಯಿತು. ಬೆಳಿಗ್ಗೆ 10ರ ನಂತರ ನೆಲ ಒಣಗಿದ ಮೇಲೆ ವ್ಯಾಪಾರ, ವಹಿವಾಟು ಚುರುಕಾಯಿತು. ಗ್ರಾಹಕರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಖರೀದಿ ಮಾಡಿದರು.