ಆರೋಪ ಏನು?: ದೆಹಲಿಯ ಮೀರ್ ವಿಹಾರ್ ಪ್ರದೇಶದ ಶಸ್ತ್ರಾಸ್ತ್ರ ತಯಾರಿಕಾ ಘಟಕದಲ್ಲಿ ಅಪಾರ ಪ್ರಮಾಣದ ಯುದ್ಧೋಪಕರಣ, ಸ್ಫೋಟಕಗಳನ್ನು ದೆಹಲಿ ಪೊಲೀಸರ ವಿಶೇಷ ಘಟಕ ಪತ್ತೆ ಮಾಡಿತ್ತು. ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಭಟ್ಕಳ್, ಫಾಸಿಹ್ ಸೇರಿದಂತೆ ಉಗ್ರ ಸಂಘಟನೆಯ ಸದಸ್ಯರು ಸಂಚು ಹೂಡಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಎಲ್ಲ ಆರೋಪಗಳನ್ನು ಆರೋಪಿಯು ನಿರಾಕರಿಸಿದ್ದ.