ಆದರೆ, ಅರಣ್ಯ ಇಲಾಖೆ ಶುಲ್ಕ ವಸೂಲಿಯನ್ನು ನಿಲ್ಲಿಸುವುದರ ಜೊತೆಗೆ ಪ್ರವೇಶ ದ್ವಾರವನ್ನೇ ಮುಚ್ಚಿದೆ. ನಿಸರ್ಗಧಾಮದೊಳಗೆ ಬೈಕ್ನಲ್ಲಿ ಹೋಗಲು ಸ್ಥಳೀಯರಿಗೆ ಅವಕಾಶವಿದೆ. ಆದರೆ, ಪ್ರವಾಸಿಗರ ವಾಹನವನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಹಲವು ಬಾರಿ ಅವರೂ ನಡೆದುಕೊಂಡೇ ಹೋಗಬೇಕಾಗುತ್ತದೆ. ಅಲ್ಲದೇ, ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿ, ಅದರೊಳಗೆ ಬೆಲೆಬಾಳುವ ವಸ್ತುಗಳನ್ನು ಇಟ್ಟು ಅವುಗಳ ಸುರಕ್ಷತೆಯ ಆತಂಕದಲ್ಲೇ ಪ್ರವಾಸಿಗರು ನಿಸರ್ಗಧಾಮದ ಒಳಕ್ಕೆ ಹೋಗಬೇಕಾಗಿದೆ.