ಕೂಲಿ ಕಾರ್ಮಿಕರಾಗಿರುವ ವಿಕ್ಟರಿ ವೇಲು, ತಿಂಡಿ ಕೊಡಿಸಲೆಂದು ಮಗನನ್ನು ಬೆಳಿಗ್ಗೆ ಅಂಗಡಿಗೆ ಕರೆದುಕೊಂಡು ಹೋಗಿದ್ದರು. ತಿಂಡಿ ಖರೀದಿಸಿ ಮಗನ ಕೈಗೆ ಕೊಟ್ಟಿದ್ದರು. ತಾವು ಅಂಗಡಿಯವನಿಗೆ ಹಣ ಕೊಡುತ್ತಿದ್ದರು. ತಿಂಡಿ ಕೈಯಲ್ಲಿ ಹಿಡಿದುಕೊಂಡಿದ್ದ ಗಿರಿಪ್ರಕಾಶ್, ಓಡುತ್ತ ರಸ್ತೆ ದಾಟಲು ಯತ್ನಿಸಿದ್ದ. ಅದೇ ವೇಳೆಯಲ್ಲೇ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಾನ್ ಆತನಿಗೆ ಗುದ್ದಿತ್ತು ಎಂದು ತಿಳಿಸಿದರು.