ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿಡ್ನಿ ಜಾಲಕ್ಕೆ ಬಲಿಪಶು’

Last Updated 24 ಮೇ 2018, 19:19 IST
ಅಕ್ಷರ ಗಾತ್ರ

ಜೈಪುರ: ಕಾಲುರಾಮ್‌ ಬಚ್ಚಾರಾಮ್‌ ಕಿಡ್ನಿ ಮಾರಾಟ ಜಾಲಕ್ಕೆ ಬಲಿಪಶುವಾಗಿದ್ದಾನೆ ಎಂದು ಆತನ ಕುಟುಂಬದ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

‘ಮಂಗಳವಾರ ಎರಡು ಬಾರಿ ಕರೆ ಮಾಡಿದ್ದ ಕಾಲುರಾಮ್‌, ಜೀವಕ್ಕೆ ಅಪಾಯವಿದೆ ಎಂದಿದ್ದ. ತನ್ನನ್ನು ಕೊಂದು, ಕಿಡ್ನಿ ಮತ್ತು ಕಣ್ಣುಗಳನ್ನು ತೆಗೆದು ಮಾರಾಟ ಮಾಡಲು ಕೆಲವರು ಹಿಂಬಾಲಿಸುತ್ತಿದ್ದಾರೆ ಎಂದಿದ್ದ. ಕರೆ ಮಾಡಿದಾಗ ಆತ ಕೂಗುವುದು ಕೇಳಿಸುತ್ತಿತ್ತು’ ಎಂದು ಕಾಲುರಾಮ್‌ ಸಹೋದರ ಸೋಮಾರಾಮ್‌ ಹೇಳಿದ್ದಾರೆ.

‘ಮಧ್ಯಾಹ್ನ 2.30ರಿಂದ 5.30ರ ಮಧ್ಯೆ ಎರಡು ಪ್ರತ್ಯೇಕ ದೂರವಾಣಿ ಸಂಖ್ಯೆಯಿಂದ ಕರೆ ಮಾಡಿ, ಕೆಲವರು ನನ್ನನ್ನು ಹಿಡಿದು ಪುಣೆಯಿಂದ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ತನ್ನ ಅಂಗಾಂಗಳನ್ನು ತೆಗೆಯಲು ಅವರು ಬಯಸಿದ್ದಾರೆ’ ಎಂದು ಹೇಳಿರುವುದಾಗಿ ಸೋನಾರಾಮ್‌ ತಿಳಿದ್ದಾರೆ.

ಒಳ್ಳೆಯ ಹುಡುಗ: ಕಾಲುರಾಮ್‌ನನ್ನು ಥಳಿಸುತ್ತಿರುವ ವಿಡಿಯೊ ಆತನ ಗ್ರಾಮದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ. ’ಆತ ಮಧು ಸ್ವಭಾವದ ಹುಡುಗ’ ಎಂದು ಪಾಲಿ ಜಿಲ್ಲೆಯ ನಿಮಜ್‌ ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT