ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಂಕ್ರೀಟ್ ಹಾಕಲು ₹ 1.33 ಕೋಟಿ ವೆಚ್ಚದ ಕಾಮಗಾರಿಯನ್ನು ಗುತ್ತಿಗೆದಾರರು ಆರಂಭಿಸಿ, ಅರ್ಧಕ್ಕೆ ನಿಲ್ಲಿಸಿದ್ದಾರೆ. ಬಸ್ ನಿಲ್ದಾಣದ ಎದುರಿಗಿರುವ ನೆಲಕ್ಕೆ ಸಿ.ಸಿ ಬೆಡ್ ಹಾಕದ ಕಾರಣ ಅದು ಕೊಳದಂತಾಗಿದ್ದು, ಮಳೆ ನೀರು ಭರ್ತಿಯಾದರೆ ಬಸ್ ನಿಲ್ದಾಣ ಪ್ರವೇಶಿಸಲು ಪ್ರಯಾಣಿಕರಿಗೆ ಕಠಿಣವಾಗುತ್ತದೆ.