ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಮನುಷ್ಯ ಎಷ್ಟೇ ಸುಶಿಕ್ಷಿತನಾದರೂ ಸಂಪಾದಿಸಿದರೂ ತಿಳಿವಳಿಕೆ, ವಿವೇಕಗಳು ಇಲ್ಲದಿದ್ದರೆ ಮನುಷ್ಯನಾಗುವುದಿಲ್ಲ. ಮಾನವೀಯತೆ ಇಲ್ಲದ ಕ್ರೂರ ರಾಕ್ಷಸರಂತೆ ವರ್ತಿಸಿದ ಕಾರ್ಖಾನೆಯ ಮಾಲೀಕರಿಗೂ ನ್ಯಾಯಾಲಯ ಇದೇ ರೀತಿಯ ಶಿಕ್ಷೆ ವಿಧಿಸಿದರೆ ಸರಿ ಹೋದೀತು. ಆದರೆ ನಮ್ಮ ದೇಶದ ಕಾನೂನುಗಳಡಿಯಲ್ಲಿ ಅದಾಗುವುದೇ? ಗಾಂಧಿ ಹುಟ್ಟಿದ ನಾಡಿನಲ್ಲಿ, ಮಾನವೀಯತೆ ಇಲ್ಲದ ಇಂತಹ ಮನುಷ್ಯರು ಇನ್ನೂ ನೂರಾರು, ಸಾವಿರಾರು ಇರಬಹುದು. ಅಂಥವರೆಲ್ಲರಿಗೂ ಈ ಮೂಲಕ ಧಿಕ್ಕಾರವಿರಲಿ.