ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟು ಆಡಂಬರ ಬೇಕಿತ್ತೇ?

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಎಚ್‌.ಡಿ. ಕುಮಾರಸ್ವಾಮಿ ಅವರು ವಿಧಾನಸೌಧದ ಮುಂದೆ ಆಡಂಬರದ ಸಮಾರಂಭ ಆಯೋಜಿಸಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಲು ಇಷ್ಟೊಂದು ಅದ್ದೂರಿತನದ ಅಗತ್ಯವಿತ್ತೇ? ಕೆಲವೇ ಕೆಲವು ಜನರ ಮಧ್ಯೆ, ಸರಳವಾಗಿ ಇಂಥ ಕಾರ್ಯಕ್ರಮ ನಡೆದರೆ ಜನ ಅವರನ್ನು ಮುಖ್ಯಮಂತ್ರಿ ಎನ್ನುವುದಿಲ್ಲವೇ? ಈ ಸಮಾರಂಭಕ್ಕಾಗಿ ಅದೆಷ್ಟು ಹಣ ಖರ್ಚಾಯಿತೋ! ‘ಯಾರದೋ ಹಣ; ಎಲ್ಲಮ್ಮನ ಜಾತ್ರೆ’!

ಇಂಥ ದುಂದುವೆಚ್ಚಗಳನ್ನು ನಿಲ್ಲಿಸಿ, ಆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು. ಇನ್ನು ಮುಂದಾ
ದರೂ ಜನಪ್ರತಿನಿಧಿಗಳು ಅಂಥ ಭಾವನೆ ಬೆಳೆಸಿಕೊಳ್ಳಲಿ.

-ಸುಭಾಸ ಯಾದವಾಡ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT